ಹರಿಹರ ಅಮರಾವತಿ ಬಡಾವಣೆಯ ಮುನೀಸ್ ಧವನ್ ಎಂಬವರು ತನ್ನ ಪತ್ನಿ ಪಪಿಯಾ ಧವನ್, ತಾಯಿ ಉಷಾ ಧವನ್ ಅವರನ್ನು ಕೂರಿಸಿಕೊಂಡು ದಾವಣಗೆರೆ ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರು ಕೆರೆಗೆ ಬಿದ್ದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಮೂವರೂ ಕಾರಿನಿಂದ ಹೊರಗೆ ಬಂದಿದ್ದಾರೆ. ಬಳಿಕ ಕ್ರೇನ್ ಮೂಲಕ ಕಾರನ್ನು ಮೇಲೆಕ್ಕೆತ್ತಲಾಯಿತು ಎಂದು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.