ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಚಂದ್ರಮ್ಮ ಅವರು 2 ದಿನದ ಹಿಂದೆ ಗ್ರಾಮದ ಹತ್ತಕ್ಕೂ ಹೆಚ್ಚು ಕೂಲಿಕಾರರೊಂದಿಗೆ ಸಿದ್ದಮ್ಮನಹಳ್ಳಿಯ ರೈತ ನಾಗೇಂದ್ರಪ್ಪ ಎಂಬುವವರ ಹೊಲದಲ್ಲಿ ರಾಗಿ ಕಟಾವು ಮಾಡಲು ತೆರಳಿದ್ದರು. ಕೂಲಿ ಕೆಲಸ ಮುಗಿದ ನಂತರ ₹ 30 ಸಾವಿರ ಹಣ ಇದ್ದ ಎಲೆಅಡಿಕೆ ಚೀಲ ಹೊಲದಲ್ಲಿ ಎಲ್ಲೋ ಬಿದ್ದು ಹೋಗಿರುವುದು ತಿಳಿದಿದೆ. ಇಡೀ ಹೊಲವನ್ನು ಹುಡುಕಾಡಿದರೂ ಚೀಲ ಪತ್ತೆಯಾಗಿರಲಿಲ್ಲ.