<p><strong>ದಾವಣಗೆರೆ:</strong> ‘ವಿಶ್ವದಲ್ಲಿ ಅನೇಕ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದ್ದು, ಅವುಗಳನ್ನು ಎದುರಿಸಲು ವೈದ್ಯ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉಸ್ತುವಾರಿ ನಿರ್ದೇಶಕ ಶ್ರೀಕಾಂತ್ ತ್ರಿಪಾಠಿ ಸಲಹೆ ನೀಡಿದರು.</p>.<p>‘ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ 9ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ತಂತ್ರಜ್ಞಾನ ಮಾನವೀಯತೆ ಮೆರೆಸುತ್ತಿದ್ದು, ಈ ನಿಟ್ಟಿನಲ್ಲಿ ಮಾನವೀಯ ಸ್ಪರ್ಶ ನೀಡಬೇಕು’ ಎಂದರು.</p>.<p>1986ಲ್ಲಿ ಭಾರತದಲ್ಲಿ ಎಚ್ಐವಿ ಪತ್ತೆಯಾಯಿತು. ವಿದೇಶದಲ್ಲಿದ್ದ ಈ ರೋಗ ನಮ್ಮಲ್ಲಿಗೂ ಬರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಆನಂತರ ದೊಡ್ಡ ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಯಿತು. ಈ ರೋಗಕ್ಕೆ ನಮ್ಮ ಬಳಿ ಚಿಕಿತ್ಸೆ ಇರಲಿಲ್ಲ.ಈ ರೋಗದ ವಿರುದ್ಧ ಹೋರಾಡಲು ಅನೇಕ ಕಂಪನಿಗಳು ಔಷಧವನ್ನು ಪತ್ತೆಹಚ್ಚಿವೆ’ ಎಂದರು.</p>.<p>‘ಎಚ್ಐವಿ ನಂತರ ಸಾರ್ಸ್ ರೋಗ ಕಾಣಿಸಿಕೊಂಡಿತು. ಈಗ ಕೊರೊನ ವೈರಸ್ ಕಾಣಿಸಿಕೊಂಡಿದೆ. ಇದು ಭಾರತಕ್ಕೆ ಕಾಲಿಟ್ಟರೆ ಇದಕ್ಕೆ ನಾವು ಸದಾ ಸಿದ್ಧವಾಗಿರಬೇಕಿದೆ. ಅದನ್ನು ಎದುರಿಸುವುದು ಹೇಗೆ ಆ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು. ಮುಂದೆಯೂ ಹೊಸ ರೋಗಗಳು ಬರಬಹುದು. ಆದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು. ವೈದ್ಯ ಆಜೀವ ವಿದ್ಯಾರ್ಥಿಯಂತೆ. ಕಲಿಯುವ ಬಯಕೆ ವೈದ್ಯರು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಜಾಗತಿಕವಾಗಿ ಹೊಸ ಸಲಕರಣೆಗಳು ಬರುತ್ತಿವೆ. ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿಗಳು ದೊಡ್ಡ ಪಾತ್ರ ವಹಿಸಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ಕುಮಾರ್ ಸಲಹೆ ನೀಡಿದರು.</p>.<p>‘ಭಾರತ ಹಲವು ವಲಯಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, 1950ರಲ್ಲಿ ಅಮೆರಿಕ ಹಾಗೂ ರಷ್ಯಾಗಳು ವ್ಯೂಹಾತ್ಮಕ ಸ್ಪರ್ಧೆ ನಡೆಸುತ್ತಿದ್ದವು. ಆಗ ವಿಕ್ರಮ್ ಸಾರಾಭಾಯಿ ಅವರು ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತದ ಬೆಳವಣಿಗೆಗೆ ಬಳಸಲು ಬಯಸಿದ್ದರು’ ಎಂದು ಹೇಳಿದರು.</p>.<p>‘ಅಮೆರಿಕ ಹಾಗೂ ರಷ್ಯಾಗಳು 24ರಿಂದ 27 ಉಪಗ್ರಹಗಳಿಂದ ಮೊಬೈಲ್ ಜಿಪಿಎಸ್ ಬಳಸಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ನಾವು ಕೇವಲ 7 ಉಪಗ್ರಹಗಳ ಗುಚ್ಛದಿಂದ ‘ನಾವಿಕ್’ ತಂತ್ರಜ್ಞಾನ ರೂಪಿಸಿದ್ದೇವೆ. ಭಾರತದಲ್ಲಷ್ಟೇ ಅಲ್ಲದೇ ಅದರಾಚೆಗೂ 1500 ಕಿ.ಮೀ. ಜಿಪಿಎಸ್ ಒದಗಿಸುತ್ತಿದ್ದೇವೆ. ಇದು ಮೀನುಗಾರಿಗೆ ನೆರವಾಗುತ್ತಿದೆ’ ಎಂದರು.</p>.<p>‘ಉಪಗ್ರಹ ಆಧರಿತ ಉಪಕರಣಗಳು ಜೀವನದ ಎಲ್ಲ ಅಂಗಗಳ ಮೇಲೆ ಪರಿಣಾಮ ಬೀರುತ್ತಿದ್ದು, ನಾಗರಿಕರ ಜೀವನವನ್ನು ಉತ್ತಮ ಮಾಡುವ ವಲಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಆರೋಗ್ಯವಿದ್ದರೆ ಸಾಧನೆ ಸಾಧ್ಯ. ಇಲ್ಲಿ ನಿಮಗೆ ವಿಪುಲ ಅವಕಾಶ ಅವಕಾಶಗಳಿದ್ದು, ಭಾರತ ಈಗ ಆರ್ಥಿಕವಾಗಿ ನಂಬರ್ 1 ಸ್ಥಾನ ಪಡೆಯುವ ಅವಕಾಶಗಳೂ ಇದ್ದು, ವೈದ್ಯ ವಿದ್ಯಾರ್ಥಿಗಳು ವಿಭಿನ್ನವಾಗಿ ಕೆಲಸ ಮಾಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಾಜಕ್ಕೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ರವೀಂದ್ರ ಬಣಕರ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ವಿಶ್ವದಲ್ಲಿ ಅನೇಕ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದ್ದು, ಅವುಗಳನ್ನು ಎದುರಿಸಲು ವೈದ್ಯ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉಸ್ತುವಾರಿ ನಿರ್ದೇಶಕ ಶ್ರೀಕಾಂತ್ ತ್ರಿಪಾಠಿ ಸಲಹೆ ನೀಡಿದರು.</p>.<p>‘ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ 9ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ತಂತ್ರಜ್ಞಾನ ಮಾನವೀಯತೆ ಮೆರೆಸುತ್ತಿದ್ದು, ಈ ನಿಟ್ಟಿನಲ್ಲಿ ಮಾನವೀಯ ಸ್ಪರ್ಶ ನೀಡಬೇಕು’ ಎಂದರು.</p>.<p>1986ಲ್ಲಿ ಭಾರತದಲ್ಲಿ ಎಚ್ಐವಿ ಪತ್ತೆಯಾಯಿತು. ವಿದೇಶದಲ್ಲಿದ್ದ ಈ ರೋಗ ನಮ್ಮಲ್ಲಿಗೂ ಬರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಆನಂತರ ದೊಡ್ಡ ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಯಿತು. ಈ ರೋಗಕ್ಕೆ ನಮ್ಮ ಬಳಿ ಚಿಕಿತ್ಸೆ ಇರಲಿಲ್ಲ.ಈ ರೋಗದ ವಿರುದ್ಧ ಹೋರಾಡಲು ಅನೇಕ ಕಂಪನಿಗಳು ಔಷಧವನ್ನು ಪತ್ತೆಹಚ್ಚಿವೆ’ ಎಂದರು.</p>.<p>‘ಎಚ್ಐವಿ ನಂತರ ಸಾರ್ಸ್ ರೋಗ ಕಾಣಿಸಿಕೊಂಡಿತು. ಈಗ ಕೊರೊನ ವೈರಸ್ ಕಾಣಿಸಿಕೊಂಡಿದೆ. ಇದು ಭಾರತಕ್ಕೆ ಕಾಲಿಟ್ಟರೆ ಇದಕ್ಕೆ ನಾವು ಸದಾ ಸಿದ್ಧವಾಗಿರಬೇಕಿದೆ. ಅದನ್ನು ಎದುರಿಸುವುದು ಹೇಗೆ ಆ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು. ಮುಂದೆಯೂ ಹೊಸ ರೋಗಗಳು ಬರಬಹುದು. ಆದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು. ವೈದ್ಯ ಆಜೀವ ವಿದ್ಯಾರ್ಥಿಯಂತೆ. ಕಲಿಯುವ ಬಯಕೆ ವೈದ್ಯರು ಅಳವಡಿಸಿಕೊಳ್ಳಬೇಕು’ ಎಂದರು.</p>.<p>ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಜಾಗತಿಕವಾಗಿ ಹೊಸ ಸಲಕರಣೆಗಳು ಬರುತ್ತಿವೆ. ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿಗಳು ದೊಡ್ಡ ಪಾತ್ರ ವಹಿಸಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ಕುಮಾರ್ ಸಲಹೆ ನೀಡಿದರು.</p>.<p>‘ಭಾರತ ಹಲವು ವಲಯಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, 1950ರಲ್ಲಿ ಅಮೆರಿಕ ಹಾಗೂ ರಷ್ಯಾಗಳು ವ್ಯೂಹಾತ್ಮಕ ಸ್ಪರ್ಧೆ ನಡೆಸುತ್ತಿದ್ದವು. ಆಗ ವಿಕ್ರಮ್ ಸಾರಾಭಾಯಿ ಅವರು ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತದ ಬೆಳವಣಿಗೆಗೆ ಬಳಸಲು ಬಯಸಿದ್ದರು’ ಎಂದು ಹೇಳಿದರು.</p>.<p>‘ಅಮೆರಿಕ ಹಾಗೂ ರಷ್ಯಾಗಳು 24ರಿಂದ 27 ಉಪಗ್ರಹಗಳಿಂದ ಮೊಬೈಲ್ ಜಿಪಿಎಸ್ ಬಳಸಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ನಾವು ಕೇವಲ 7 ಉಪಗ್ರಹಗಳ ಗುಚ್ಛದಿಂದ ‘ನಾವಿಕ್’ ತಂತ್ರಜ್ಞಾನ ರೂಪಿಸಿದ್ದೇವೆ. ಭಾರತದಲ್ಲಷ್ಟೇ ಅಲ್ಲದೇ ಅದರಾಚೆಗೂ 1500 ಕಿ.ಮೀ. ಜಿಪಿಎಸ್ ಒದಗಿಸುತ್ತಿದ್ದೇವೆ. ಇದು ಮೀನುಗಾರಿಗೆ ನೆರವಾಗುತ್ತಿದೆ’ ಎಂದರು.</p>.<p>‘ಉಪಗ್ರಹ ಆಧರಿತ ಉಪಕರಣಗಳು ಜೀವನದ ಎಲ್ಲ ಅಂಗಗಳ ಮೇಲೆ ಪರಿಣಾಮ ಬೀರುತ್ತಿದ್ದು, ನಾಗರಿಕರ ಜೀವನವನ್ನು ಉತ್ತಮ ಮಾಡುವ ವಲಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಆರೋಗ್ಯವಿದ್ದರೆ ಸಾಧನೆ ಸಾಧ್ಯ. ಇಲ್ಲಿ ನಿಮಗೆ ವಿಪುಲ ಅವಕಾಶ ಅವಕಾಶಗಳಿದ್ದು, ಭಾರತ ಈಗ ಆರ್ಥಿಕವಾಗಿ ನಂಬರ್ 1 ಸ್ಥಾನ ಪಡೆಯುವ ಅವಕಾಶಗಳೂ ಇದ್ದು, ವೈದ್ಯ ವಿದ್ಯಾರ್ಥಿಗಳು ವಿಭಿನ್ನವಾಗಿ ಕೆಲಸ ಮಾಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಾಜಕ್ಕೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.</p>.<p>ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ರವೀಂದ್ರ ಬಣಕರ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>