‘ಕಾರಿಗನೂರಿನ ನೇಗಿಲಯೋಗಿ ಸಂಘವು ತರಿಸಿದ್ದ ಡ್ರಂ ಸೀಡರ್ನಿಂದ ನಾನು ಮೂರು ಎಕರೆ ಪ್ರದೇಶದಲ್ಲಿ ಒಂದು ಎಕರೆಗೆ 10 ಕಿಲೋದಂತೆ ಆರ್.ಎನ್.ಆರ್.ತಳಿಯ ಭತ್ತದ ಬೀಜವನ್ನು ಬಿತ್ತನೆ ಮಾಡಿದ್ದು, ನಾಟಿ ಮಾಡುವಾಗ ಬಳಸುವಂತೆ ಇದರಲ್ಲಿ ಯಾವುದೇ ಗೊಬ್ಬರವನ್ನು ಬಳಸಿಲ್ಲ. ಬಿತ್ತನೆಯಾದ ನಂತರ 25 ದಿನಕ್ಕೆ ಎಕರೆಗೆ 40 ಕೆ.ಜಿ.ಯೂರಿಯಾ, ಮತ್ತೆ 25 ದಿನದ ನಂತರ 40 ಕಿಲೋ ಯೂರಿಯಾ 25 ದಿನಗಳ ನಂತರ 50 ಕೆ.ಜಿಯಷ್ಟು ಡಿ.ಎ.ಪಿ.25 ಕೆ.ಜಿ.ಯೂರಿಯಾ, 25 ಕೆ.ಜಿ.ಪೊಟ್ಯಾಷ್ ಬಳಸಿದ್ದೇನೆ. ಒಮ್ಮೆ ಮಾತ್ರ ಕಳೆನಾಶಕ ಬಳಸಲಾಗಿದ್ದು, ಗೊಬ್ಬರ ಬಳಕೆಯಲ್ಲಿ ಶೇಕಡ 60ರಷ್ಟು ಉಳಿತಾಯವಾಗಿದೆ’ ಎನ್ನುತ್ತಾರೆ.