ಘಟನೆ ವಿವರ: ದುರಗೇಶನ ಅಕ್ಕನ ಮಗಳಾದ ಕೊಟ್ಟೂರಿನ ಆಶಾಳನ್ನು ಸಂತೋಷ್ 2019ರಿಂದ ಪ್ರೀತಿಸುತ್ತಿದ್ದ. ಈ ಸಂಬಂಧ ಇಬ್ಬರ ನಡುವೆ ಜಗಳವಾಗಿತ್ತು. ಹಿರಿಯರು ಇಬ್ಬರಿಗೂ ಜಗಳ ಆಡದಂತೆ ಬುದ್ಧಿಮಾತು ಹೇಳಿದ್ದರು. ನಂತರ ದುರುಗೇಶ್ ಆಶಾಳನ್ನು ವಿವಾಹವಾಗಿದ್ದನು. ಮದುವೆ ಬಳಿಕವೂ ಸಂತೋಷ್, ಆಶಾಳೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿರುವ ವಿಚಾರ ದುರುಗೇಶ್ಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ದುರುಗೇಶ್, ಪ್ರಕರಣದ 2ನೇ ಆರೋಪಿ ಕಾರ್ತಿಕ್ ಸಹಾಯ ಪಡೆದು ಸಂತೋಷ್ನನ್ನು ಕಳೆದ ಫೆಬ್ರುವರಿ 26ರ ರಾತ್ರಿ 11.30ಕ್ಕೆ ಹಡಗಲಿ ರಸ್ತೆ ಕೆಇಬಿ ಪಕ್ಕದ ನೀರಿನ ಟ್ಯಾಂಕ್ ಬಳಿ ಕರೆದುಕೊಂಡು ಹೋಗಿ, ಹೊಡೆದು ಸಾಯಿಸಿ ಹಡಗಲಿ ತಾಲ್ಲೂಕಿನ ಕುಮಾರನಹಳ್ಳಿ ತಾಂಡಾ ಬಳಿ ಇರುವ ಅರಣ್ಯದಲ್ಲಿ ಬೀಸಾಡಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.