ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್ ಕೆ.ಎಂ. ಮತ್ತವರ ಕುಟುಂಬವು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಬಂದು ಭಾನುವಾರ ಬೆಳಿಗ್ಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಭರಣಗಳಿದ್ದ ಬ್ಯಾಗನ್ನು ಅವರ ಪತ್ನಿ ಅಲ್ಲೇ ಬಿಟ್ಟು ಹೋಗಿದ್ದರು. ಬ್ಯಾಗಲ್ಲಿ 164 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, ಮೊಬೈಲ್, ಔಷಧ, ₹ 12 ಸಾವಿರ ನಗದು ಸೇರಿ ₹ 7.31 ಲಕ್ಷ ಮೌಲ್ಯದ ಸೊತ್ತುಗಳು ಇದ್ದವು.