ಪ್ರತಿಯೊಬ್ಬರನ್ನೂ ಉಚಿತವಾಗಿ ಕೋವಿಡ್ ಪರೀಕ್ಷೆಗೊಳಪಡಿಸಿ ಔಷಧೋಪಚಾರ ಒದಗಿಸಬೇಕು.ಪ್ರತಿಯೊಬ್ಬರಿಗೂ ಮುಂದಿನ ಆರು ತಿಂಗಳವರೆಗೆ ತಿಂಗಳಿಗೆ ₹ 7, 500 ಪರಿಹಾರ ನೀಡಬೇಕು.ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆ.ಜಿ. ಉಚಿತ ಆಹಾರಧಾನ್ಯ ವಿತರಿಸಬೇಕು.ಉದ್ಯೋಗ ಖಾತ್ರಿ ವೇತನವನ್ನು ಕನಿಷ್ಠ ₹ 600 ಕ್ಕೆ ಹೆಚ್ಚಿಸಬೇಕು. ಅದನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಕನಿಷ್ಠ 200 ದಿನಗಳ ಕೂಲಿ ನೀಡಬೇಕು.ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.