ಮೊದಲ ಸೋಮವಾರ ಸಂಜೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದೇವಿಯ ಖೇಲು ಸ್ಥಾಪಿಸಲಾಗುವುದು. ವಿಶೇಷಪೂಜೆ ನೆರವೇರಿದ ನಂತರ ಗ್ರಾಮದ ಪ್ರತಿಯೊಂದು ಮನೆಯಿಂದ ವಿವಿಧ ರೀತಿಯ ಸಿಹಿ ಅಡುಗೆ, ಚಿತ್ರಾನ್ನ, ಪಾಯಸ ತಂದು ದೇವಿಗೆ ನೈವೇದ್ಯ ಮಾಡಲಾಗುವುದು. ನಂತರ ಪ್ರಸಾದವನ್ನು ಸಾಮೂಹಿಕವಾಗಿ ಸೇವಿಸುತ್ತಾರೆ. ಮನೆಯಲ್ಲಿದ್ದವರು ಮನೆಯಲ್ಲಿ ಊಟ ಮಾಡುತ್ತಾರೆ. ಈ ಆಚರಣೆ ಶ್ರಾವಣ ಮಾಸದ ಕೊನೆಯ ಸೋಮವಾರದ ತನಕ ನಡೆಯುತ್ತದೆ. ಅಂದು ಗ್ರಾಮ ದೇವತೆಗಳಾದ ಬಸವೇಶ್ವರ, ಪರಿಶಿಷ್ಟರ ಕಾಲೊನಿಯ ದುರ್ಗಮ್ಮ, ಆಂಜನೇಯಸ್ವಾಮಿ ಮೂರ್ತಿಗಳ ಮೆರವಣಿಗೆ ನಡೆಯುವುದು ಎಂದು ಹಿರಿಯರಾದ ಎಂ.ಜಿ. ಬಸವರಾಜಪ್ಪ, ಜಿ.ಎಚ್. ಪರಮೇಶ್ವರಪ್ಪ, ಬೆಳಗುತ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್. ರವಿಕುಮಾರ, ಹನುಮಂತಪ್ಪ ಹೇಳಿದರು. ಬೆಳಗುತ್ತಿ ಗ್ರಾಮದ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ದೇವಿಯ ಖೇಲು ಸ್ಥಾಪಿಸಲಾಗುವುದು.