ದಾವಣಗೆರೆ: ಶಿವಮೊಗ್ಗದ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
‘ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯವರು ಗೆಲ್ಲಲಿ ಎಂದು ಹಾರೈಸಿರುವುದು ಒಳ್ಳೆಯದೇ ಆಯಿತು. ನಾನು ಕೆಲವು ಘಟನೆಗಳಿಂದ ಬೇಸರಗೊಂಡು ಹಿಂದೆ ಬಿಜೆಪಿ ತೊರೆದಿದ್ದೆ. ಕಾಂಗ್ರೆಸ್ಗೆ ಸೇರಿದಾಗ ಆಗಲಿ, ಹೊರಬಂದಿರುವುದರಿಂದ ಯಾವುದೇ ಪಾಪಪ್ರಜ್ಞೆಯಾಗಲೀ ಅಥವಾ ಪಶ್ಚಾತ್ತಾಪವಾಗಲೀ ಇಲ್ಲ’ ಎಂದರು.