ಈ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ. ನಿತ್ಯ ಕಾರಣ ಹುಡುಕಿಕೊಂಡು ಹೊರಗೆ ಬರುತ್ತಿದ್ದೀರಿ. ಒಂದಿನ ಕರಿಬೇವು, ಮತ್ತೊಂದು ದಿನ ಕೊತ್ತಂಬರಿ ಸೊಪ್ಪು, ಇನ್ನೊಂದು ದಿನ ಉಳ್ಳಾಗಡ್ಡಿ, ಸೌತೆಕಾಯಿ, ಸಕ್ಕರೆ, ಚಾಪುಡಿ ಹೀಗೆ ಖರೀದಿಗೆ ಬರುತ್ತಿದ್ದೀರಿ. ಅದನ್ನು ನಿಲ್ಲಿಸಿ. ಹಗುರವಾಗಿ ಪರಿಗಣಿಸಿದವರೆಲ್ಲ ಇಲ್ಲವಾಗಿದ್ದಾರೆ. ಅವರಿಗೆ ಸ್ಮಶಾನದಲ್ಲಿಯೂ ಜಾಗ ಸಿಗುತ್ತಿಲ್ಲ ಎಂದು ಎಚ್ಚರಿಸಿದ್ದಾರೆ.