
ತವರು ಮನೆಯಿಂದ ಬೆಂಗಳೂರಿಗೆ ಮರಳಲು ಬಸ್ ನಿಲ್ದಾಣಕ್ಕೆ ಬಂದೆ. ಸಾರಿಗೆ ಮುಷ್ಕರದ ಬಗ್ಗೆ ಮಾಹಿತಿ ಇರಲಿಲ್ಲ. ಎಲೆಕ್ಟ್ರಿಕ್ ಖಾಸಗಿ ಬಸ್ಗಳಲ್ಲಿ ‘ಶಕ್ತಿ’ ಯೋಜನೆಯ ಸೇವೆ ಸಿಗುತ್ತಿಲ್ಲ.
– ಸಹನಾ, ಬೆಂಗಳೂರು
ಶ್ರಾವಣ ಮಾಸದಲ್ಲಿ ಉಕ್ಕಡಗಾತ್ರಿಯ ಕರಿಬಸವೇಶ್ವರಸ್ವಾಮಿ ದರ್ಶನ ಪಡೆಯುವುದು ವಾಡಿಕೆ. ಪೂಜಾ ಕೈಂಕರ್ಯ ಮುಗಿಸಿ ಮಂಗಳವಾರ ಊರಿಗೆ ಮರಳಲು ತೊಂದರೆ ಉಂಟಾಯಿತು.
– ನರಸಮ್ಮ, ಚಿತ್ರದುರ್ಗಕೆಎಸ್ಆರ್ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಮಂಗಳವಾರ ಬಿಕೋ ಎನ್ನುತ್ತಿತ್ತು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್ಆರ್ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ದಾವಣಗೆರೆಯ ಬಸ್ ನಿಲ್ದಾಣದಲ್ಲಿ ಸೇವೆಗೆ ಸಜ್ಜಾಗದೇ ನಿಂತಿದ್ದ ಬಸ್ಗಳು –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್ಆರ್ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ಬಸ್ ಸೇವೆ ಲಭ್ಯವಾಗದೇ ದಾವಣಗೆರೆ ನಿಲ್ದಾಣದಲ್ಲಿ ಮಗುವಿನ ಕೈಹಿಡಿದು ಭಾರವಾದ ಚೀಲ ಹೊತ್ತ ಪ್ರಯಾಣಿಕರು ಖಾಸಗಿ ಬಸ್ ಹುಡುಕುತ್ತಾ ಸಾಗಿದ ದೃಶ್ಯ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ಕೆಎಸ್ಆರ್ಟಿಸಿ ಸಿಬ್ಬಂದಿ ಮುಷ್ಕರದಿಂದಾಗಿ ಖಾಸಗಿ ಬಸ್ಗಳು ಮಂಗಳವಾರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸೇವೆ ಒದಗಿಸಿದವು. ಖಾಸಗಿ ಬಸ್ಗಳಿಗೆ ಪ್ರಯಾಣಿಕರು ಮುಗಿಬಿದಿದ್ದು ಕಂಡುಬಂದಿತು–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯ ರೈಲ್ವೆ ನಿಲ್ದಾಣದ ಬಳಿ ಅಪರೂಪಕ್ಕೊಮ್ಮೆ ಆಗಮಿಸಿದ ಕೆಎಸ್ಆರ್ಟಿಸಿ ಬಸ್ಗೆ ಪ್ರಯಾಣಿಕರು ಮುಗಿಬಿದ್ದ ಪರಿ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ