ಶೇಖರಪ್ಪ ನಗರದಲ್ಲಿ ವಿತರಿಸಲು ಶಾಮನೂರು ಕುಟುಂಬ 200 ಕಿಟ್ಗಳನ್ನು ನೀಡಿತ್ತು. ಆದರೆ 450 ಕುಟುಂಬಗಳಿಗೆ ಕಿಟ್ ಅವಶ್ಯ ಇತ್ತು. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತ ದಾದಾಪೀರ್ ಸ್ವತಃ ವೆಚ್ಚ ಮಾಡಿ 150 ಕಿಟ್ ತಯಾರಿಸಿ ವಿತರಿಸಿದ್ದರು. ಕಿಟ್ ವಿತರಣೆ ಮಾಡುವಾಗ ಆರಂಭದಲ್ಲೇ ಶ್ರೀಕಾಂತ್ ಅವರ ಕುಟುಂಬಕ್ಕೆ ನೀಡಲಾಗಿತ್ತು. ಆದರೂ ಕಿಟ್ ನೀಡಿಲ್ಲ. ಕೇಳಿದಾಗ ಹಲ್ಲೆ ನಡೆಸಿದ್ದಾರೆ ಎಂದು ಶ್ರೀಕಾಂತ್ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.