<p><strong>ಹರಪನಹಳ್ಳಿ</strong>: ಮಕ್ಕಳು ಆದರ್ಶ ಪ್ರಜೆಗಳಾಗಿ ಹೊರಹೊಮ್ಮಲು ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ, ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಕಡತಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಭಾನುವಾರ ಹರಜಾತ್ರೆಗೆ ಆಹ್ವಾನ ನೀಡಿ ಅವರು ಮಾತನಾಡಿದರು.</p>.<p>ಚಿಕ್ಕ ಮಕ್ಕಳೇ ಪೋಲಿಯೊ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜ್ಞಾನದ ಕೊರತೆಯಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು ಲಭ್ಯವಾಗುವಂತೆ ಈಗಿನಿಂದಲೇ ಕಾಳಜಿವಹಿಸಬೇಕು ಎಂದರು.</p>.<p>ಜ.14 ರಿಂದ ಜ.15ರ ವರೆಗೆ ಎರಡು ದಿನ ನಡೆಯುವ ಹರಜಾತ್ರೆ ಹರಿಹರ ಪೀಠದ ಆವರಣದಲ್ಲಿ ನಡೆಯಲಿದೆ. ಸ್ವಾವಲಂಬಿ ಭಾರತ, ಕೃಷಿ, ಯುವಜನ, ಮಹಿಳೆಯರ ಕುರಿತಾಗಿ ನಡೆಯುವ ಸಮಾವೇಶದಲ್ಲಿ ಗಣ್ಯರು, ಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಜಾತ್ರೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.</p>.<p>ದುಗ್ಗಾವತಿ, ತಾವರಗುಂದಿ, ನಿಟ್ಟೂರು, ಹಲುವಾಗಲು, ಅರಸನಾಳು, ಐ.ಬೇವಿನಹಳ್ಳಿ, ಹಾರಕನಾಳು, ಗೌರಿಹಳ್ಳಿ, ನೀಲಗುಂದ ಗ್ರಾಮಗಳಿಗೆ ತೆರಳಿ ಹರಜಾತ್ರೆಗೆ ಭಕ್ತರನ್ನು ಆಹ್ವಾನಿಸಿದರು. ಕಡತಿ ಗ್ರಾಮದ ಅರಣ್ಯ ಸೇವಾ ಸಮಿತಿ ಕಾರ್ಯಕರ್ತರು ಸ್ವಾಮೀಜಿಗೆ ಸಸಿಗಳನ್ನು ನೀಡಿ ಸನ್ಮಾನಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಜಗದೀಶ, ಚೆನ್ನನಗೌಡ, ಮಹೇಶ್ ಪೂಜಾರ್, ಬೇಲೂರು ಸಿದ್ದೇಶ್, ಬಸವರಾಜ್, ಶಶಿಧರ್, ಭರತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ</strong>: ಮಕ್ಕಳು ಆದರ್ಶ ಪ್ರಜೆಗಳಾಗಿ ಹೊರಹೊಮ್ಮಲು ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ, ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಕಡತಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮದರ್ಶನ ಕಾರ್ಯಕ್ರಮದಲ್ಲಿ ಭಾನುವಾರ ಹರಜಾತ್ರೆಗೆ ಆಹ್ವಾನ ನೀಡಿ ಅವರು ಮಾತನಾಡಿದರು.</p>.<p>ಚಿಕ್ಕ ಮಕ್ಕಳೇ ಪೋಲಿಯೊ, ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜ್ಞಾನದ ಕೊರತೆಯಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು ಲಭ್ಯವಾಗುವಂತೆ ಈಗಿನಿಂದಲೇ ಕಾಳಜಿವಹಿಸಬೇಕು ಎಂದರು.</p>.<p>ಜ.14 ರಿಂದ ಜ.15ರ ವರೆಗೆ ಎರಡು ದಿನ ನಡೆಯುವ ಹರಜಾತ್ರೆ ಹರಿಹರ ಪೀಠದ ಆವರಣದಲ್ಲಿ ನಡೆಯಲಿದೆ. ಸ್ವಾವಲಂಬಿ ಭಾರತ, ಕೃಷಿ, ಯುವಜನ, ಮಹಿಳೆಯರ ಕುರಿತಾಗಿ ನಡೆಯುವ ಸಮಾವೇಶದಲ್ಲಿ ಗಣ್ಯರು, ಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಜಾತ್ರೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಆಹ್ವಾನ ನೀಡಿದರು.</p>.<p>ದುಗ್ಗಾವತಿ, ತಾವರಗುಂದಿ, ನಿಟ್ಟೂರು, ಹಲುವಾಗಲು, ಅರಸನಾಳು, ಐ.ಬೇವಿನಹಳ್ಳಿ, ಹಾರಕನಾಳು, ಗೌರಿಹಳ್ಳಿ, ನೀಲಗುಂದ ಗ್ರಾಮಗಳಿಗೆ ತೆರಳಿ ಹರಜಾತ್ರೆಗೆ ಭಕ್ತರನ್ನು ಆಹ್ವಾನಿಸಿದರು. ಕಡತಿ ಗ್ರಾಮದ ಅರಣ್ಯ ಸೇವಾ ಸಮಿತಿ ಕಾರ್ಯಕರ್ತರು ಸ್ವಾಮೀಜಿಗೆ ಸಸಿಗಳನ್ನು ನೀಡಿ ಸನ್ಮಾನಿಸಿದರು.</p>.<p>ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಜಗದೀಶ, ಚೆನ್ನನಗೌಡ, ಮಹೇಶ್ ಪೂಜಾರ್, ಬೇಲೂರು ಸಿದ್ದೇಶ್, ಬಸವರಾಜ್, ಶಶಿಧರ್, ಭರತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>