<p><strong>ಮಲೇಬೆನ್ನೂರು</strong>: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 71ನೇ ಆರಾಧನಾ ಮಹೋತ್ಸವ ಮಂಗಳವಾರ ವಿಧ್ಯುಕ್ತವಾಗಿ ಆರಂಭವಾಯಿತು.</p>.<p>ಮೊದಲ ದಿನ ಗಣಹೋಮ ಶಿವಮೊಗ್ಗದ ಆಗಮಿಕ ಶಂಕರಾನಂದ ಜೋಯ್ಸ್, ಮಲ್ಲಾರಿ ಜೋಯ್ಸ್, ವಿಜಯಕುಮಾರ್ ಜೋಯ್ಸ್, ವಿನಯ್, ಎಂ.ಪಿ.ನಟರಾಜನ್ ನೇತೃತ್ವದಲ್ಲಿ ‘ಸಹಸ್ರ ಮೋದಕ ಗಣಹೋಮ’, ‘ಗಣಪತಿ ಅಥರ್ವ ಶೀರ್ಷ’ ಮಂತ್ರ ಪಠಣ ರುದ್ರಾಭಿಷೇಕ ಮಾಡಿ ಪೂರ್ಣಾಹುತಿ ಸಮರ್ಪಣೆ ಮಾಡಿದರು.</p>.<p>ಗುರುಚರಿತ್ರೆ ಪಾರಾಯಣ, ದುರ್ಗಾ ಸಪ್ತಶತಿ ಪಾರಾಯಣ, ಭಗವದ್ಗೀತೆ, ಸುಂದರಕಾಂಡ ಪಠಣ, ಮಹಾಭಾರತ, ರಾಮಾಯಣ ವಾಚನ, ಭಜನೆ, ಅಷ್ಠಾವಧಾನದ ಕಾರ್ಯಕ್ರಮಗಳು ನಡೆದವು. ಭಕ್ತರು ಸಾಮೂಹಿಕವಾಗಿ ಗುರುಭಜನೆ ಪಠಿಸಿದರು.</p>.<p>ಆಶ್ರಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಸಮಾಧಿ ಸ್ಥಳಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ತಡಗಣಿಯ ಅವಧೂತ ರವೀಂದ್ರನಾಥ್ ಇದ್ದರು.</p>.<p>ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಒಂದು ವಾರ ಆರಾಧನಾ ಮಹೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ 71ನೇ ಆರಾಧನಾ ಮಹೋತ್ಸವ ಮಂಗಳವಾರ ವಿಧ್ಯುಕ್ತವಾಗಿ ಆರಂಭವಾಯಿತು.</p>.<p>ಮೊದಲ ದಿನ ಗಣಹೋಮ ಶಿವಮೊಗ್ಗದ ಆಗಮಿಕ ಶಂಕರಾನಂದ ಜೋಯ್ಸ್, ಮಲ್ಲಾರಿ ಜೋಯ್ಸ್, ವಿಜಯಕುಮಾರ್ ಜೋಯ್ಸ್, ವಿನಯ್, ಎಂ.ಪಿ.ನಟರಾಜನ್ ನೇತೃತ್ವದಲ್ಲಿ ‘ಸಹಸ್ರ ಮೋದಕ ಗಣಹೋಮ’, ‘ಗಣಪತಿ ಅಥರ್ವ ಶೀರ್ಷ’ ಮಂತ್ರ ಪಠಣ ರುದ್ರಾಭಿಷೇಕ ಮಾಡಿ ಪೂರ್ಣಾಹುತಿ ಸಮರ್ಪಣೆ ಮಾಡಿದರು.</p>.<p>ಗುರುಚರಿತ್ರೆ ಪಾರಾಯಣ, ದುರ್ಗಾ ಸಪ್ತಶತಿ ಪಾರಾಯಣ, ಭಗವದ್ಗೀತೆ, ಸುಂದರಕಾಂಡ ಪಠಣ, ಮಹಾಭಾರತ, ರಾಮಾಯಣ ವಾಚನ, ಭಜನೆ, ಅಷ್ಠಾವಧಾನದ ಕಾರ್ಯಕ್ರಮಗಳು ನಡೆದವು. ಭಕ್ತರು ಸಾಮೂಹಿಕವಾಗಿ ಗುರುಭಜನೆ ಪಠಿಸಿದರು.</p>.<p>ಆಶ್ರಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಸಮಾಧಿ ಸ್ಥಳಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ತಡಗಣಿಯ ಅವಧೂತ ರವೀಂದ್ರನಾಥ್ ಇದ್ದರು.</p>.<p>ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಒಂದು ವಾರ ಆರಾಧನಾ ಮಹೋತ್ಸವ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>