ಗುರುವಾರ ಸಂಜೆ ವೇಳೆಗೆ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಾವಿಹಾಳು, ಕೊಡಗನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಭೂಮಿ ತಂಪಾಗಿದೆ. ತೋಟಗಾರಿಕಾ ಬೆಳೆಗಳು ಈಗಾಗಲೇ ಒಣಗುವ ಹಂತಕ್ಕೆ ಬಂದು ನಿಂತಿದ್ದವು. ಹಲವು ತೋಟಗಳು ಒಣಗಿ ಹೋಗಿವೆ. ಕಳೆದ ನಾಲ್ಕಾರು ತಿಂಗಳಿಂದ ತೋಟಗಳಿಗೆ ನಿತ್ಯವೂ ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಿದ್ದ ರೈತರಿಗೆ ಈ ಮಳೆ ಹರ್ಷ ತಂದಿದೆ. ಟ್ಯಾಂಕರ್ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಬಾವಿಹಾಳು ಹಾಗು ಸುತ್ತಮುತ್ತಲ ಗ್ರಾಮಗಳ ರೈತರು ಹೇಳಿದ್ದಾರೆ.