‘ಪ್ರಭಾವಿ ವ್ಯಕ್ತಿಯೊಬ್ಬರ ನಿವೇಶನಕ್ಕೆ ಮರಗಳು ಅಡ್ಡವಾಗುತ್ತವೆ ಎಂಬ ಕಾರಣಕ್ಕೆ ಕಡಿಯಲಾಗಿದೆ. ಜಾಗತಿಕ ತಾಪಮಾನ ಏರುತ್ತಿರುವ ಸಮಯದಲ್ಲಿ ಸರ್ಕಾರಿ ಜಾಗದಲ್ಲಿಯೂ ಮರಗಳನ್ನು ಉಳಿಸಿಕೊಳ್ಳದಿರುವುದು ವಿಪರ್ಯಾಸ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಅರಣ್ಯ ಇಲಾಖೆಯ ಕೆಳಗಿನ ಅಧಿಕಾರಿಗಳು ಲೈಸನ್ಸ್ ನೀಡಿದ್ದಾರೆ. ಪಾಲಿಕೆಯಿಂದಲೂ ಒಳಗೊಳಗೆ ಪರ್ಮಿಶನ್ ತಗೊಂಡಿದ್ದಾರೆ. ನಾಳೆ ವಲಯ ಅರಣ್ಯ ಅಧಿಕಾರಿಗೆ ಸಾಲುಮರದ ವೀರಾಚಾರ್ ಸಹಿತ ಪರಿಸರ ಪ್ರೇಮಿಗಳೆಲ್ಲ ಹೋಗಿ ದೂರು ನೀಡಲಿದ್ದೇವೆ’ ಎಂದು ಪರಿಸರ ಪ್ರೇಮಿ ಕೆ.ಟಿ. ಗೋಪಾಲ ಗೌಡ ತಿಳಿಸಿದ್ದಾರೆ.