ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಸಕ್ತಿ ಇರುವ ಕವಿಗಳು ಸ್ವರಚಿತ ಕವನಗಳನ್ನು ಏ.25ರ ಒಳಗೆ ಸುಬ್ರಹ್ಮಣ್ಯ ನಾಡಿಗೇರ, ಅಧ್ಯಕ್ಷರು, ಚಿಂತನ ಪ್ರತಿಷ್ಠಾನ, ನಂ.194, ನಾಡಿಗೇರ ನಿಲಯ, ಕೋಟೆ, ಹರಿಹರ-577601, ದಾವಣಗೆರೆ. ಮೊ.ನಂ. 9242046726 ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು. ಕವನಗಳು 20ರಿಂದ 25 ಸಾಲು ಮೀರಿರಬಾರದು. ಒಂದು ಕವನ ಆಯ್ಕೆ ಮಾಡಿ ಗೋಷ್ಠಿಯಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದು. ಆಯ್ಕೆಯಾದ ಕವನ ವಾಚನ ಮಾಡಲು ಕವಿ ತಮ್ಮ ಕೈಬರಹ ಅಥವಾ ಮುದ್ರಿತ ಪ್ರತಿಯನ್ನು ತರಬೇಕು. ಮೊಬೈಲ್ ನೋಡಿಕೊಂಡು ವಾಚನಕ್ಕೆ ಅವಕಾಶವಿಲ್ಲ.
ಕವನ ವಾಚನಕ್ಕೆ ಯಾವುದೇ ನೋಂದಣಿ ಶುಲ್ಕ ಇಲ್ಲ. ಭಾಗವಹಿಸುವ ಕವಿಗಳಿಗೆ ಸಂಸ್ಥೆಯಿಂದ ಸತ್ಕರಿಸಿ, ಅಭಿನಂದನಾ ಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.