ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಸಾಲ ಮಾಡಿ ಪ್ರೀಮಿಯಂ ಕಟ್ಟಿದ ಕೃಷಿಕರಿಗೆ ‘ಬಡ್ಡಿ’ ಹೊರೆ

ಬೆಳೆ ವಿಮೆ ಪರಿಹಾರಕ್ಕಾಗಿ ತಪ್ಪದ ಅಲೆದಾಟ; ಸಂಕಷ್ಟದಲ್ಲಿ ಅನ್ನದಾತರು
Published : 22 ಜುಲೈ 2024, 8:27 IST
Last Updated : 22 ಜುಲೈ 2024, 8:27 IST
ಫಾಲೋ ಮಾಡಿ
Comments
ಯೂನಿಟ್ ಆಧಾರದ ಮೇಲೆ ಬೆಳೆ ವಿಮೆ ಪರಿಹಾರ ನೀಡುವ ಮಾನದಂಡದಲ್ಲಿ ದೋಷಗಳಿದ್ದು ಸರಿಪಡಿಸಬೇಕು. ಪರಿಹಾರದ ಹಣ ಜಮೆಯಾಗುವುದು ವಿಳಂಬವಾದಷ್ಟೂ ರೈತರ ಸಾಲದ ಬಡ್ಡಿ ಹೆಚ್ಚಾಗುತ್ತದೆ
ತೇಜಸ್ವಿ ಪಟೇಲ್‌ ರೈತ ಮುಖಂಡ
15 ಎಕರೆ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದೆ. ಒಟ್ಟು ₹ 3 ಲಕ್ಷ ಪರಿಹಾರ ಮೊತ್ತ ಬರಬೇಕಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಆದಷ್ಟು ಬೇಗ ಪರಿಹಾರ ಮೊತ್ತ ಜಮೆ ಮಾಡಬೇಕು
ರಾಘವೇಂದ್ರ ರೈತ ಮುಖಂಡ ಹಸಗೋಡು ಜಗಳೂರು
5 ಬಾರಿ ಬೆಂಗಳೂರಿಗೆ ತೆರಳಿ ಕೃಷಿ ಇಲಾಖೆ ಆಯುಕ್ತರು ಇನ್ಶುರೆನ್ಸ್‌ ಕಂಪನಿಯ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದ್ದೇವೆ. ಸಾಧ್ಯವಾದಷ್ಟು ಬೇಗ ಪರಿಹಾರ ನೀಡಿದರೆ ಕೃಷಿ ಕಾರ್ಯಕ್ಕೆ ಅನುಕೂಲವಾಗುತ್ತದೆ
ಕೆ.ಬಿ.ರವಿ ರೈತ ಮುಖಂಡ ಹಸಗೋಡು ಜಗಳೂರು
₹140 ಕೋಟಿ ಬಿಡುಗಡೆ: ಚಿಂತಾಲ್‌
‘ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ 2023–24ರ ಮುಂಗಾರು ಬೆಳೆಗೆ ಜಿಲ್ಲೆಯ 34000 ರೈತರು ಪ್ರೀಮಿಯಂ ಪಾವತಿಸಿದ್ದರು. ಬೆಳೆ ವಿಮೆ ಪರಿಹಾರವಾಗಿ ₹ 140 ಕೋಟಿ ಬಿಡುಗಡೆ ಆಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್‌ ತಿಳಿಸಿದರು. ‘ಜಿಲ್ಲೆಯ ಬಹುತೇಕ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರದ ಮೊತ್ತ ಜಮೆಯಾಗಿದೆ. ತಾಂತ್ರಿಕ ಕಾರಣದಿಂದ ಕೆಲವು ರೈತರ ಖಾತೆಗಳಿಗೆ ಹಣ ಜಮೆಯಾಗದಿರುವುದು ಗಮನಕ್ಕೆ ಬಂದಿದ್ದು ಶೀಘ್ರವೇ ಎಲ್ಲ ಅರ್ಹ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರದ ಮೊತ್ತ ಜಮೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT