ದಾವಣಗೆರೆ ತಾಲ್ಲೂಕಿನ ಗ್ರಾಮದ 17 ವರ್ಷ 9 ತಿಂಗಳ ಬಾಲಕಿಯನ್ನು ಮತ್ತು ಹರಪನಹಳ್ಳಿ ತಾಲ್ಲೂಕಿನ ಮೈಲಾರಪ್ಪ ಎಂಬ ಯುವಕನ ಜತೆಗೆ ಜ.30ರಂದು ಮದುವೆ ನಡೆಸಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಕ್ಕಳ ಸಹಾಯವಾಣಿಯ ಸಂಯೋಜಕ ಟಿ.ಎಂ.ಕೊಟ್ರೇಶ್ ಟಿ.ಎಂ. ಕಾರ್ಯಕರ್ತ ರವಿ.ಬಿ ಅವರು ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಮೇಲ್ವಿಚಾರಕಿ ಆಶಾ, ಚಾಲಕ ಕುಮಾರ್, ಪಿಡಿಒ ಶಾರದಮ್ಮ, ಮುಖ್ಯ ಶಿಕ್ಷಕ ಎಚ್. ಅಂಜಿನಪ್ಪ, ಮಾಯಕೊಂಡ ಠಾಣೆಯ ಪೊಲೀಸ್ ಅಣ್ಣಯ್ಯ, ನಾಗರಾಜ ಜೊತೆಗೆ ಆ ಮನೆಗೆ ತೆರಳಿದರು.