<p><strong>ದಾವಣಗೆರೆ:</strong> ಪ್ಲಾಸ್ಟಿಕ್ ತ್ಯಾಜ್ಯವು ನದಿಗಳ ಮೂಲಕ ನೂರಾರು ಕಿ.ಮೀ ಸಾಗಿ ಸಾಗರ ತಲುಪುತ್ತದೆ. ಕರ್ನಾಟಕದ ವಿಸ್ತೀರ್ಣಕ್ಕಿಂತ 6 ಪಟ್ಟು ಹೆಚ್ಚಿನ ಸಾಗರ ಪ್ರದೇಶ ಪ್ಲಾಸ್ಟಿಕ್ನಿಂದ ಆವೃತವಾಗಿದೆ. ಮನೆಯಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಸಾಗರಗಳ ಉಸಿರುಗಟ್ಟುತ್ತಿದೆ ಎಂದು ಪರಿಸರ ತಜ್ಞ ವಿನೋದ್ ಬೋಧನಕರ್ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಈಚೆಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭೂಮಿ ಕೇವಲ ನೆಲವಲ್ಲ. ಅದು ನೀರಿನ ಲೋಕ. ಭೂಮಿಯ ಶೇ 70ರಷ್ಟು ಭಾಗ ಸಾಗರ ಹಾಗೂ ಶೇ 30ರಷ್ಟು ಭೂಮಿ. ಇದನ್ನು ‘ಭೂ-ಜಲ-ಗೋಳ’ ಎಂದು ಕರೆಯಬೇಕಿದೆ. ಸಾಗರವೆಂದರೆ ಕೇವಲ ನೀರಿನ ಅಲೆಗಳ ಸಮೂಹವಲ್ಲ. ಅದು ಭೂಮಿಯ ಉಸಿರಾಟದ ಶಕ್ತಿ’ ಎಂದರು.</p>.<p>‘ನದಿ, ಮಳೆ, ಮೋಡಗಳೆಲ್ಲವೂ ಸಾಗರದ ಉಡುಗೊರೆಗಳು. ಸಾಗರವಿಲ್ಲದಿದ್ದರೆ ನದಿಯಿಲ್ಲ, ನದಿಯಿಲ್ಲದಿದ್ದರೆ ಆಹಾರವಿಲ್ಲ, ಆಹಾರವಿಲ್ಲದಿದ್ದರೆ ಜೀವನವೇ ಇಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಸಾಗರ ಸೇರಿದ ಪ್ಲಾಸ್ಟಿಕ್ ಸೂರ್ಯನ ಕಿರಣವನ್ನು ತಡೆಯುತ್ತದೆ. ಸಮುದ್ರ ಸಸ್ಯಗಳನ್ನು ಕೊಲ್ಲುತ್ತದೆ. ಆಮ್ಲಜನಕ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಈ ಪ್ರವೃತ್ತಿ ಮುಂದುವರಿದರೆ 2070ರೊಳಗೆ ಮಾನವಕುಲವು ಉಸಿರಾಡಲು, ಆಹಾರ ಪಡೆಯಲು ಹಾಗೂ ತಾಪಮಾನ ತಾಳಲು ಕಷ್ಟಪಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ’ ಎಂದರು.</p>.<p>‘ಪ್ರತಿಯೊಬ್ಬರು ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಬೇಕು. ಹೊರಗಿನಿಂದ ಪ್ಲಾಸ್ಟಿಕ್ ತರುವುದನ್ನು ನಿಲ್ಲಿಸಬೇಕು. ಪ್ರತಿ ತಿಂಗಳು ಕಾಲೇಜಿಗೆ ತಂದು ನೀಡಬೇಕು. ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್ನ್ನು ಮರುಬಳಕೆಗೆ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಗಣೇಶ್ ಡಿ.ಬಿ., ಮಂಜಪ್ಪ ಎಸ್., ಶಿವಯೋಗಿ ಬಿ.ಎಚ್., ಎಂ.ರಮೇಶ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಪ್ಲಾಸ್ಟಿಕ್ ತ್ಯಾಜ್ಯವು ನದಿಗಳ ಮೂಲಕ ನೂರಾರು ಕಿ.ಮೀ ಸಾಗಿ ಸಾಗರ ತಲುಪುತ್ತದೆ. ಕರ್ನಾಟಕದ ವಿಸ್ತೀರ್ಣಕ್ಕಿಂತ 6 ಪಟ್ಟು ಹೆಚ್ಚಿನ ಸಾಗರ ಪ್ರದೇಶ ಪ್ಲಾಸ್ಟಿಕ್ನಿಂದ ಆವೃತವಾಗಿದೆ. ಮನೆಯಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಸಾಗರಗಳ ಉಸಿರುಗಟ್ಟುತ್ತಿದೆ ಎಂದು ಪರಿಸರ ತಜ್ಞ ವಿನೋದ್ ಬೋಧನಕರ್ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ಈಚೆಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭೂಮಿ ಕೇವಲ ನೆಲವಲ್ಲ. ಅದು ನೀರಿನ ಲೋಕ. ಭೂಮಿಯ ಶೇ 70ರಷ್ಟು ಭಾಗ ಸಾಗರ ಹಾಗೂ ಶೇ 30ರಷ್ಟು ಭೂಮಿ. ಇದನ್ನು ‘ಭೂ-ಜಲ-ಗೋಳ’ ಎಂದು ಕರೆಯಬೇಕಿದೆ. ಸಾಗರವೆಂದರೆ ಕೇವಲ ನೀರಿನ ಅಲೆಗಳ ಸಮೂಹವಲ್ಲ. ಅದು ಭೂಮಿಯ ಉಸಿರಾಟದ ಶಕ್ತಿ’ ಎಂದರು.</p>.<p>‘ನದಿ, ಮಳೆ, ಮೋಡಗಳೆಲ್ಲವೂ ಸಾಗರದ ಉಡುಗೊರೆಗಳು. ಸಾಗರವಿಲ್ಲದಿದ್ದರೆ ನದಿಯಿಲ್ಲ, ನದಿಯಿಲ್ಲದಿದ್ದರೆ ಆಹಾರವಿಲ್ಲ, ಆಹಾರವಿಲ್ಲದಿದ್ದರೆ ಜೀವನವೇ ಇಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಸಾಗರ ಸೇರಿದ ಪ್ಲಾಸ್ಟಿಕ್ ಸೂರ್ಯನ ಕಿರಣವನ್ನು ತಡೆಯುತ್ತದೆ. ಸಮುದ್ರ ಸಸ್ಯಗಳನ್ನು ಕೊಲ್ಲುತ್ತದೆ. ಆಮ್ಲಜನಕ ಉತ್ಪಾದನೆಗೆ ಅಡ್ಡಿಯಾಗುತ್ತದೆ. ಈ ಪ್ರವೃತ್ತಿ ಮುಂದುವರಿದರೆ 2070ರೊಳಗೆ ಮಾನವಕುಲವು ಉಸಿರಾಡಲು, ಆಹಾರ ಪಡೆಯಲು ಹಾಗೂ ತಾಪಮಾನ ತಾಳಲು ಕಷ್ಟಪಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ’ ಎಂದರು.</p>.<p>‘ಪ್ರತಿಯೊಬ್ಬರು ಮನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಬೇಕು. ಹೊರಗಿನಿಂದ ಪ್ಲಾಸ್ಟಿಕ್ ತರುವುದನ್ನು ನಿಲ್ಲಿಸಬೇಕು. ಪ್ರತಿ ತಿಂಗಳು ಕಾಲೇಜಿಗೆ ತಂದು ನೀಡಬೇಕು. ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್ನ್ನು ಮರುಬಳಕೆಗೆ ಸಂಸ್ಥೆಗಳಿಗೆ ಕಳುಹಿಸಲಾಗುತ್ತದೆ’ ಎಂದು ಹೇಳಿದರು.</p>.<p>ಪ್ರಾಂಶುಪಾಲ ಗಣೇಶ್ ಡಿ.ಬಿ., ಮಂಜಪ್ಪ ಎಸ್., ಶಿವಯೋಗಿ ಬಿ.ಎಚ್., ಎಂ.ರಮೇಶ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>