<p><strong>ಜಗಳೂರು</strong>: ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸಮೀಪ ಗುರುವಾರ ರಾತ್ರಿ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾತರ ರೂಪಾಯಿ ಮೌಲ್ಯದ 4 ಟನ್ಗೂ ಹೆಚ್ಚು ದಾಳಿಂಬೆ ಹಣ್ಣುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. </p>.<p>ಗ್ರಾಮದ ರವಿಕುಮಾರ್ ಎಂಬುವವರ ತೋಟಕ್ಕೆ ನುಗ್ಗಿರುವ ಐದಾರು ಮಂದಿ ಕಳ್ಳರು ನಾಲ್ಕು ಟನ್ಗೂ ಹೆಚ್ಚು ಹಣ್ಣುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. </p>.<p>ಮೂರು ಲಕ್ಷಕ್ಕೂ ಹೆಚ್ಚು ಬೆಲೆಯ ದಾಳಿಂಬೆ ಹಣ್ಣುಗಳನ್ನು ಕಳವು ಮಾಡಲಾಗಿದೆ. ಸಾಲ ಮಾಡಿ ಬೆಳೆದ ಫಸಲು ಕೈಸೇರುವ ಮುನ್ನವೇ ಕಳ್ಳರ ಪಾಲಾಗಿರುವುದು ಆತಂಕ ತಂದಿದೆ ಎಂದು ರೈತ ರವಿಕುಮಾರ್ ತಿಳಿಸಿದ್ದಾರೆ. </p>.<p>ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸಿದ್ರಾಮಯ್ಯ, ಎಸ್.ಐ. ಶರಣ ಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಕಮಂಡಲಗುಂದಿ ಮತ್ತು ತಾಯಿಟೊಣೆ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ದಾಳಿಂಬೆ ಬೆಳೆಯಲಾಗುತ್ತಿದೆ. </p>.<p>ಕೆಲವು ದಿನಗಳ ಹಿಂದೆ ಹಿಂದಿ ಮಾತನಾಡುತ್ತಿದ್ದ ಕೆಲವರು ಜಮೀನಿನ ಬಳಿ ಬಂದು ಹೋಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಸಿಪಿಐ ಸಿದ್ರಾಮಯ್ಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು</strong>: ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸಮೀಪ ಗುರುವಾರ ರಾತ್ರಿ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಲಕ್ಷಾತರ ರೂಪಾಯಿ ಮೌಲ್ಯದ 4 ಟನ್ಗೂ ಹೆಚ್ಚು ದಾಳಿಂಬೆ ಹಣ್ಣುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. </p>.<p>ಗ್ರಾಮದ ರವಿಕುಮಾರ್ ಎಂಬುವವರ ತೋಟಕ್ಕೆ ನುಗ್ಗಿರುವ ಐದಾರು ಮಂದಿ ಕಳ್ಳರು ನಾಲ್ಕು ಟನ್ಗೂ ಹೆಚ್ಚು ಹಣ್ಣುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. </p>.<p>ಮೂರು ಲಕ್ಷಕ್ಕೂ ಹೆಚ್ಚು ಬೆಲೆಯ ದಾಳಿಂಬೆ ಹಣ್ಣುಗಳನ್ನು ಕಳವು ಮಾಡಲಾಗಿದೆ. ಸಾಲ ಮಾಡಿ ಬೆಳೆದ ಫಸಲು ಕೈಸೇರುವ ಮುನ್ನವೇ ಕಳ್ಳರ ಪಾಲಾಗಿರುವುದು ಆತಂಕ ತಂದಿದೆ ಎಂದು ರೈತ ರವಿಕುಮಾರ್ ತಿಳಿಸಿದ್ದಾರೆ. </p>.<p>ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಸಿದ್ರಾಮಯ್ಯ, ಎಸ್.ಐ. ಶರಣ ಬಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಕಮಂಡಲಗುಂದಿ ಮತ್ತು ತಾಯಿಟೊಣೆ ಮುಂತಾದ ಗ್ರಾಮಗಳಲ್ಲಿ ವ್ಯಾಪಕವಾಗಿ ದಾಳಿಂಬೆ ಬೆಳೆಯಲಾಗುತ್ತಿದೆ. </p>.<p>ಕೆಲವು ದಿನಗಳ ಹಿಂದೆ ಹಿಂದಿ ಮಾತನಾಡುತ್ತಿದ್ದ ಕೆಲವರು ಜಮೀನಿನ ಬಳಿ ಬಂದು ಹೋಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಸಿಪಿಐ ಸಿದ್ರಾಮಯ್ಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>