<p><strong>ಹರಿಹರ</strong>: ನಗರದ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳು ಬೆಳಗುತ್ತಿವೆ.</p>.<p>‘ಹರಿಹರ: ಬೀದಿ ದೀಪಗಳಿಲ್ಲದ ಕತ್ತಲೆ ಸಾಮ್ರಾಜ್ಯ’ ಶೀರ್ಷಿಕೆಯಡಿ ಪ್ರಜಾವಾಣಿ ಶನಿವಾರ (ಅ.18)ದ ಸಂಚಿಕೆಯಲ್ಲಿ ವಿಶೇಷ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಶನಿವಾರ ರಾತ್ರಿಯೇ ದಾವಣಗೆರೆ ರಸ್ತೆ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳನ್ನು ಸರಿಪಡಿಸಿದ್ದಾರೆ. </p>.<p>ಈ ಎರಡೂ ಸೇತುವೆಗಳ ಮೇಲೆ ಬೆಳಗಿನ ಜಾವ ಹಾಗೂ ಸಂಜೆಯ ವಾಯು ವಿಹಾರಕ್ಕೆ ಹೋಗುವವರು, ಸಂಚರಿಸುವ ಪಾದಚಾರಿಗಳು, ಸೈಕಲ್ ಸವಾರರು ನಿರಾತಂಕವಾಗಿ ಸಂಚರಿಸಲು ಅನುಕೂಲವಾಗಿದೆ.</p>.<p>ಹೊಸ ಸೇತುವೆ ಮೇಲೆ ಇನ್ನೂ ಕತ್ತಲು: ತುಂಗಭದ್ರಾ ಹೊಸ ಸೇತುವೆ ಮೇಲಿನ ಬೀದಿ ದೀಪಗಳು ಇನ್ನೂ ಬೆಳಗಿಲ್ಲ, ರೈಲ್ವೆ ಮೇಲ್ಸೇತುವೆ ಇಕ್ಕೆಲಗಳ ಸರ್ವಿಸ್ ರಸ್ತೆಗಳ ಬೀದಿ ದೀಪಗಳೂ ಇನ್ನೂ ಬೆಳಗುತ್ತಿಲ್ಲ.</p>.<p>‘ಹೊಸ ಸೇತುವೆ ಮೇಲಿನ ದೀಪಗಳನ್ನು ಆನ್ ಮಾಡಲು ತಾಂತ್ರಿಕ ತೊಂದರೆ ಇದೆ. ಪ್ರಕ್ರಿಯೆ ನಡೆಸಿ ಆದಷ್ಟು ಬೇಗ ಆ ದೀಪಗಳನ್ನೂ ಆನ್ ಮಾಡಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.</p>.<p>ಸೇತುವೆಗಳನ್ನು ಹೊರತುಪಡಿಸಿ ನಗರದ ಹೊರ ಭಾಗದ ಹಾಗೂ ನಗರದೊಳಗಿನ ಹಲವು ಬಡಾವಣೆಗಳಲ್ಲೂ ಬೀದಿ ದೀಪಗಳ ನಿರ್ವಹಣೆ ತಾಳತಪ್ಪಿದೆ, ಆ ಬಡಾವಣೆಗಳ ಬೀದಿ ದೀಪಗಳು ಬೆಳಗುವಂತಾಗಬೇಕು, ವಿದ್ಯಾರ್ಥಿಗಳು, ಮಹಿಳೆಯರು, ಜನರು ನಿರಾತಂಕವಾಗಿ ಸಂಚರಿಸುವಂತಾಗಬೇಕು ಎಂಬುದು ಜನರ ಆಗ್ರಹವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ನಗರದ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳು ಬೆಳಗುತ್ತಿವೆ.</p>.<p>‘ಹರಿಹರ: ಬೀದಿ ದೀಪಗಳಿಲ್ಲದ ಕತ್ತಲೆ ಸಾಮ್ರಾಜ್ಯ’ ಶೀರ್ಷಿಕೆಯಡಿ ಪ್ರಜಾವಾಣಿ ಶನಿವಾರ (ಅ.18)ದ ಸಂಚಿಕೆಯಲ್ಲಿ ವಿಶೇಷ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಶನಿವಾರ ರಾತ್ರಿಯೇ ದಾವಣಗೆರೆ ರಸ್ತೆ ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಹಾಗೂ ತುಂಗಭದ್ರಾ ಹಳೆ ಸೇತುವೆ ಮೇಲಿನ ಬೀದಿ ದೀಪಗಳನ್ನು ಸರಿಪಡಿಸಿದ್ದಾರೆ. </p>.<p>ಈ ಎರಡೂ ಸೇತುವೆಗಳ ಮೇಲೆ ಬೆಳಗಿನ ಜಾವ ಹಾಗೂ ಸಂಜೆಯ ವಾಯು ವಿಹಾರಕ್ಕೆ ಹೋಗುವವರು, ಸಂಚರಿಸುವ ಪಾದಚಾರಿಗಳು, ಸೈಕಲ್ ಸವಾರರು ನಿರಾತಂಕವಾಗಿ ಸಂಚರಿಸಲು ಅನುಕೂಲವಾಗಿದೆ.</p>.<p>ಹೊಸ ಸೇತುವೆ ಮೇಲೆ ಇನ್ನೂ ಕತ್ತಲು: ತುಂಗಭದ್ರಾ ಹೊಸ ಸೇತುವೆ ಮೇಲಿನ ಬೀದಿ ದೀಪಗಳು ಇನ್ನೂ ಬೆಳಗಿಲ್ಲ, ರೈಲ್ವೆ ಮೇಲ್ಸೇತುವೆ ಇಕ್ಕೆಲಗಳ ಸರ್ವಿಸ್ ರಸ್ತೆಗಳ ಬೀದಿ ದೀಪಗಳೂ ಇನ್ನೂ ಬೆಳಗುತ್ತಿಲ್ಲ.</p>.<p>‘ಹೊಸ ಸೇತುವೆ ಮೇಲಿನ ದೀಪಗಳನ್ನು ಆನ್ ಮಾಡಲು ತಾಂತ್ರಿಕ ತೊಂದರೆ ಇದೆ. ಪ್ರಕ್ರಿಯೆ ನಡೆಸಿ ಆದಷ್ಟು ಬೇಗ ಆ ದೀಪಗಳನ್ನೂ ಆನ್ ಮಾಡಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.</p>.<p>ಸೇತುವೆಗಳನ್ನು ಹೊರತುಪಡಿಸಿ ನಗರದ ಹೊರ ಭಾಗದ ಹಾಗೂ ನಗರದೊಳಗಿನ ಹಲವು ಬಡಾವಣೆಗಳಲ್ಲೂ ಬೀದಿ ದೀಪಗಳ ನಿರ್ವಹಣೆ ತಾಳತಪ್ಪಿದೆ, ಆ ಬಡಾವಣೆಗಳ ಬೀದಿ ದೀಪಗಳು ಬೆಳಗುವಂತಾಗಬೇಕು, ವಿದ್ಯಾರ್ಥಿಗಳು, ಮಹಿಳೆಯರು, ಜನರು ನಿರಾತಂಕವಾಗಿ ಸಂಚರಿಸುವಂತಾಗಬೇಕು ಎಂಬುದು ಜನರ ಆಗ್ರಹವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>