<p><strong>ದಾವಣಗೆರೆ: </strong>ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ಹಿಂದೆ ಹೇಳಿದ್ದ ಮಾತು ಈಗ ನಿಜವಾಗುತ್ತಿದೆ. ಇಲ್ಲಿ ಆ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ಮಾಡಲೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಆದರೆ ಈಗ ಫ್ರಾನ್ಸ್ನಲ್ಲಿ ತನಿಖೆ ಮಾಡಲು ಆದೇಶವಾಗಿದೆ ಎಂದು ಎಸ್.ಆರ್.ಪಾಟೀಲ ಟೀಕಿಸಿದರು.</p>.<p>₹ 57 ಸಾವಿರ ಕೋಟಿ ವೆಚ್ಚದ ಖರೀದಿಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಹಿಂದೆ ರಾಹುಲ್ ಹೇಳಿದ್ದರು ಎಂದು ಸೋಮವಾರ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p>ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮಗಳನ್ನೂ ಇದು ಬಿಟ್ಟಿಲ್ಲ. ಮಾಧ್ಯಮ ಸ್ವಾತಂತ್ರ್ಯದಲ್ಲಿ ಈಗ ಭಾರತ ವಿಶ್ವದಲ್ಲಿ 140ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿವರಿಸಿದರು.</p>.<p class="Briefhead"><strong>‘ಚಕ್ಕಡಿ, ಸೈಕಲ್ನಲ್ಲಿ ಬಂದಿದ್ದರು’</strong></p>.<p>ಹಿಂದೆ ಪೆಟ್ರೋಲ್ ಬೆಲೆ 7 ಪೈಸೆ ಜಾಸ್ತಿಯಾದಾಗ ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದ ಆಗಿನ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಚಕ್ಕಡಿಯಲ್ಲಿ ಸಂಸತ್ತಿಗೆ ಬಂದಿದ್ದರು. ಯುಪಿಎ ಸರ್ಕಾರ ಇರುವಾಗ ಪೆಟ್ರೋಲ್ ಬೆಲೆ ₹ 2 ಜಾಸ್ತಿಯಾದಾಗ ಬಿಜೆಪಿಯವರು ಸೈಕಲ್ನಲ್ಲಿ ಬಂದಿದ್ದರು. ಅಡುಗೆ ಅನಿಲ ಬೆಲೆಯನ್ನು ಯುಪಿಎ ₹ 10 ಏರಿಸಿದಾಗ ಬಿಜೆಪಿಯ ಮಹಿಳಾ ಸಂಸದರು, ಮಹಿಳಾ ಶಾಸಕರು ಸಿಲಿಂಡರ್ ಹೊತ್ತುಕೊಂಡು ದೇಶದಾದ್ಯಂತ ಹೋರಾಟ ಮಾಡಿದ್ದರು. ಆಗ ಅಡುಗೆ ಅನಿಲ ಬೆಲೆ ₹ 350 ಇತ್ತು. ಈಗ ₹ 1000ದ ಹತ್ತಿರ ಬಂದಿದೆ. ಆಗಿನ ಹೋರಾಟಗಾರರು ಎಲ್ಲಿ ಹೋದರು ಎಂದು ಪಾಟೀಲ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಹುಲ್ ಗಾಂಧಿ ಹಿಂದೆ ಹೇಳಿದ್ದ ಮಾತು ಈಗ ನಿಜವಾಗುತ್ತಿದೆ. ಇಲ್ಲಿ ಆ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ಮಾಡಲೂ ಕೇಂದ್ರ ಸರ್ಕಾರ ಒಪ್ಪಿಲ್ಲ. ಆದರೆ ಈಗ ಫ್ರಾನ್ಸ್ನಲ್ಲಿ ತನಿಖೆ ಮಾಡಲು ಆದೇಶವಾಗಿದೆ ಎಂದು ಎಸ್.ಆರ್.ಪಾಟೀಲ ಟೀಕಿಸಿದರು.</p>.<p>₹ 57 ಸಾವಿರ ಕೋಟಿ ವೆಚ್ಚದ ಖರೀದಿಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ ಎಂದು ಹಿಂದೆ ರಾಹುಲ್ ಹೇಳಿದ್ದರು ಎಂದು ಸೋಮವಾರ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p>ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮಾಧ್ಯಮಗಳನ್ನೂ ಇದು ಬಿಟ್ಟಿಲ್ಲ. ಮಾಧ್ಯಮ ಸ್ವಾತಂತ್ರ್ಯದಲ್ಲಿ ಈಗ ಭಾರತ ವಿಶ್ವದಲ್ಲಿ 140ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿವರಿಸಿದರು.</p>.<p class="Briefhead"><strong>‘ಚಕ್ಕಡಿ, ಸೈಕಲ್ನಲ್ಲಿ ಬಂದಿದ್ದರು’</strong></p>.<p>ಹಿಂದೆ ಪೆಟ್ರೋಲ್ ಬೆಲೆ 7 ಪೈಸೆ ಜಾಸ್ತಿಯಾದಾಗ ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದ ಆಗಿನ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಚಕ್ಕಡಿಯಲ್ಲಿ ಸಂಸತ್ತಿಗೆ ಬಂದಿದ್ದರು. ಯುಪಿಎ ಸರ್ಕಾರ ಇರುವಾಗ ಪೆಟ್ರೋಲ್ ಬೆಲೆ ₹ 2 ಜಾಸ್ತಿಯಾದಾಗ ಬಿಜೆಪಿಯವರು ಸೈಕಲ್ನಲ್ಲಿ ಬಂದಿದ್ದರು. ಅಡುಗೆ ಅನಿಲ ಬೆಲೆಯನ್ನು ಯುಪಿಎ ₹ 10 ಏರಿಸಿದಾಗ ಬಿಜೆಪಿಯ ಮಹಿಳಾ ಸಂಸದರು, ಮಹಿಳಾ ಶಾಸಕರು ಸಿಲಿಂಡರ್ ಹೊತ್ತುಕೊಂಡು ದೇಶದಾದ್ಯಂತ ಹೋರಾಟ ಮಾಡಿದ್ದರು. ಆಗ ಅಡುಗೆ ಅನಿಲ ಬೆಲೆ ₹ 350 ಇತ್ತು. ಈಗ ₹ 1000ದ ಹತ್ತಿರ ಬಂದಿದೆ. ಆಗಿನ ಹೋರಾಟಗಾರರು ಎಲ್ಲಿ ಹೋದರು ಎಂದು ಪಾಟೀಲ ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>