<p><strong>ಹೊನ್ನಾಳಿ:</strong> ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಗ್ರಾಮದಲ್ಲಿ ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ಪ್ರಾಂಶುಪಾಲ ಪ್ರವೀಣ ದೊಡ್ಡಗೌಡ ಅವರು ಶೋಧಕಾರ್ಯ ನಡೆಸಿದ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲದ ಶೈವ ದೇವಾಲಯದ ಅವಶೇಷಗಳು ಪತ್ತೆಯಾಗಿವೆ.</p>.<p>ಅರೆಬಿಳಿಚಿಯಿಂದ ದಕ್ಷಿಣದ ಕಡೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ದೇವಾಲಯದ ಅವಶೇಷಗಳು ದೊರೆತಿವೆ. ಈ ಸ್ಥಳವು ವಡ್ಡರಹಟ್ಟಿ ಹೊಸಳ್ಳಿ ವಾಯವ್ಯ ಗಡಿಭಾಗದಲ್ಲಿರುವ ಜಮೀನಿನಲ್ಲಿದೆ. ಈ ಜಮೀನಿನ ಮಧ್ಯಭಾಗದಲ್ಲಿ 15 ಅಡಿ ಉದ್ದ 12 ಅಡಿ ಅಗಲ ಹಾಗೂ 5 ಅಡಿ ಎತ್ತರದ ದಿಬ್ಬ ಇದೆ. ಆ ದಿಬ್ಬದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ ದೇವಾಲಯದ ಅವಶೇಷಗಳು ಕಂಡುಬಂದಿವೆ.</p>.<p class="Subhead">ಇಟ್ಟಿಗೆ ತಳಪಾಯ: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಸುತ್ತಲೂ ಎರಡು ಅಡಿ ಎತ್ತರದ ಇಟ್ಟಿಗೆಯಿಂದ ನಿರ್ಮಿಸಿದ ದೇವಾಲಯದ ತಳಪಾಯ ಕಂಡುಬರುತ್ತದೆ. ಪೂರ್ಣ ಪ್ರಮಾಣದಲ್ಲಿ ಸುಟ್ಟಿರುವ ಇಟ್ಟಿಗೆಗಳನ್ನು ಬಳಸಿ ದೇವಾಲಯದ ತಳಪಾಯವನ್ನು ನಿರ್ಮಿಸಲಾಗಿದೆ.</p>.<p class="Subhead">ಹಂಚಿನ ಅವಶೇಷಗಳು: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಮೇಲ್ಭಾಗದ ಸುತ್ತಲೂ ಪ್ರಾರಂಭಿಕ ಮಧ್ಯಯುಗಕ್ಕೆ ಸಂಬಂಧಿಸಿದ ಹೆಂಚಿನ ಅವಶೇಷಗಳು ಹಾಗೂ ಮಡಿಕೆ ಚೂರುಗಳು ದೊರೆತಿವೆ. ಈ ಅವಶೇಷಗಳು 8ರಿಂದ 9ನೇ ಶತಮಾನಕ್ಕೆ ಸಂಬಂಧಿಸಿದವುಗಳಾಗಿವೆ. ಹೆಂಚು ಪೂರ್ಣ ಪ್ರಮಾಣದಲ್ಲಿ ಸುಡಲ್ಪಟ್ಟಿದ್ದು, ಅದರ ಬಣ್ಣವೂ ಕೈಗೆ ತಾಗುವುದಿಲ್ಲ ಎಂದು ಪ್ರವೀಣ ದೊಡ್ಡಗೌಡ ತಿಳಿಸಿದರು.</p>.<p class="Subhead">ಭಗ್ನಗೊಂಡ ನಂದಿಯ ಶಿಲ್ಪ: ದೇವಾಲಯದ ಅವಶೇಷಗಳಿರುವ ದಿಬ್ಬದ ಪೂರ್ವ ಭಾಗದಲ್ಲಿ ಭಗ್ನಗೊಂಡಿರುವ ನಂದಿಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪವು ಎರಡು ಅಡಿ ಎತ್ತರವಾಗಿದ್ದು, ರುಂಡ ಭಾಗವು ಸಂಪೂರ್ಣ ಭಗ್ನಗೊಂಡಿದೆ. ನಂದಿಯ ಶಿಲ್ಪವು ಸರಳವಾಗಿ ಕೆತ್ತಲಾಗಿದೆ. ಈ ಶಿಲ್ಪವನ್ನು ನಿರ್ಮಿಸಲು ಗ್ರಾನೈಟ್ ಕಲ್ಲನ್ನು ಬಳಸಲಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಗ್ರಾನೈಟ್ ಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಿರುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಕುಡಿತಿನಿ, ಹಂಪಿ, ಸಿರಿವಾಳಗಳಲ್ಲಿ ರಾಷ್ಟ್ರಕೂಟರ ದೇವಾಲಯಗಳನ್ನು ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ.</p>.<p class="Subhead">ಕೋಣನತಲೆ: ದೇವಾಲಯದ ಅವಶೇಷಗಳಿರುವ ದಿಬ್ಬದ ಹಿಂಭಾಗದಲ್ಲಿ ಕೋಣನತಲೆಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪ ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ. ಕೋಣನ ಮುಖವನ್ನು ದಷ್ಟಪುಷ್ಟವಾಗಿ ಕೆತ್ತಲಾಗಿದೆ. ಕೋಣನ ಕಂಬಗಳು ಸಮಗಾತ್ರದಲ್ಲಿವೆ. ಕೋಣನ ತಲೆಯ ಕೆಳಭಾಗದಲ್ಲಿ ಕತ್ತಿಯನ್ನು ಹಿಡಿದಿರುವ ಶಿಲ್ಪಗಳ ಕೆತ್ತನೆಯನ್ನು ಮಾಡಲಾಗಿದೆ. ಕೋಣನ ತಲೆಯನ್ನು ದೇವಿಯ ಸಂಕೇತವಾಗಿ ಪೂಜಿಸಲಾಗುತ್ತದೆ.</p>.<p>ಈ ಮೇಲಿನ ಅವಶೇಷಗಳ ಆಧಾರದ ಮೇಲೆ ದಿಬ್ಬವಿರುವ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳಬಹುದು. ಈ ಪರಿಸರದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳನ್ನು ಆಧರಿಸಿ ಇದೊಂದು ಶೈವ ದೇವಾಲಯವೆಂದು ಗುರುತಿಸಬಹುದು. ದಿಬ್ಬದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳ ಲಕ್ಷಣಗಳನ್ನು ಆಧರಿಸಿ ಈ ದೇವಾಲಯವು 7ರಿಂದ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ’ ಎಂದು ಡಾ.ಪ್ರವೀಣದೊಡ್ಡಗೌಡ ತಿಳಿಸಿದರು.</p>.<p>ಈ ಕ್ಷೇತ್ರ ಕಾರ್ಯದಲ್ಲಿ ಇತಿಹಾಸ ವಿದ್ಯಾರ್ಥಿಗಳಾದ ಕಾರ್ತಿಕ್, ಕಿರಣ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅರೆಬಿಳಚಿ ಗ್ರಾಮದಲ್ಲಿ ಹೊನ್ನಾಳಿಯ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾಗೂ ಪ್ರಾಂಶುಪಾಲ ಪ್ರವೀಣ ದೊಡ್ಡಗೌಡ ಅವರು ಶೋಧಕಾರ್ಯ ನಡೆಸಿದ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲದ ಶೈವ ದೇವಾಲಯದ ಅವಶೇಷಗಳು ಪತ್ತೆಯಾಗಿವೆ.</p>.<p>ಅರೆಬಿಳಿಚಿಯಿಂದ ದಕ್ಷಿಣದ ಕಡೆಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ದೇವಾಲಯದ ಅವಶೇಷಗಳು ದೊರೆತಿವೆ. ಈ ಸ್ಥಳವು ವಡ್ಡರಹಟ್ಟಿ ಹೊಸಳ್ಳಿ ವಾಯವ್ಯ ಗಡಿಭಾಗದಲ್ಲಿರುವ ಜಮೀನಿನಲ್ಲಿದೆ. ಈ ಜಮೀನಿನ ಮಧ್ಯಭಾಗದಲ್ಲಿ 15 ಅಡಿ ಉದ್ದ 12 ಅಡಿ ಅಗಲ ಹಾಗೂ 5 ಅಡಿ ಎತ್ತರದ ದಿಬ್ಬ ಇದೆ. ಆ ದಿಬ್ಬದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದ ದೇವಾಲಯದ ಅವಶೇಷಗಳು ಕಂಡುಬಂದಿವೆ.</p>.<p class="Subhead">ಇಟ್ಟಿಗೆ ತಳಪಾಯ: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಸುತ್ತಲೂ ಎರಡು ಅಡಿ ಎತ್ತರದ ಇಟ್ಟಿಗೆಯಿಂದ ನಿರ್ಮಿಸಿದ ದೇವಾಲಯದ ತಳಪಾಯ ಕಂಡುಬರುತ್ತದೆ. ಪೂರ್ಣ ಪ್ರಮಾಣದಲ್ಲಿ ಸುಟ್ಟಿರುವ ಇಟ್ಟಿಗೆಗಳನ್ನು ಬಳಸಿ ದೇವಾಲಯದ ತಳಪಾಯವನ್ನು ನಿರ್ಮಿಸಲಾಗಿದೆ.</p>.<p class="Subhead">ಹಂಚಿನ ಅವಶೇಷಗಳು: ಜಮೀನಿನ ಮಧ್ಯಭಾಗದಲ್ಲಿರುವ ದಿಬ್ಬದ ಮೇಲ್ಭಾಗದ ಸುತ್ತಲೂ ಪ್ರಾರಂಭಿಕ ಮಧ್ಯಯುಗಕ್ಕೆ ಸಂಬಂಧಿಸಿದ ಹೆಂಚಿನ ಅವಶೇಷಗಳು ಹಾಗೂ ಮಡಿಕೆ ಚೂರುಗಳು ದೊರೆತಿವೆ. ಈ ಅವಶೇಷಗಳು 8ರಿಂದ 9ನೇ ಶತಮಾನಕ್ಕೆ ಸಂಬಂಧಿಸಿದವುಗಳಾಗಿವೆ. ಹೆಂಚು ಪೂರ್ಣ ಪ್ರಮಾಣದಲ್ಲಿ ಸುಡಲ್ಪಟ್ಟಿದ್ದು, ಅದರ ಬಣ್ಣವೂ ಕೈಗೆ ತಾಗುವುದಿಲ್ಲ ಎಂದು ಪ್ರವೀಣ ದೊಡ್ಡಗೌಡ ತಿಳಿಸಿದರು.</p>.<p class="Subhead">ಭಗ್ನಗೊಂಡ ನಂದಿಯ ಶಿಲ್ಪ: ದೇವಾಲಯದ ಅವಶೇಷಗಳಿರುವ ದಿಬ್ಬದ ಪೂರ್ವ ಭಾಗದಲ್ಲಿ ಭಗ್ನಗೊಂಡಿರುವ ನಂದಿಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪವು ಎರಡು ಅಡಿ ಎತ್ತರವಾಗಿದ್ದು, ರುಂಡ ಭಾಗವು ಸಂಪೂರ್ಣ ಭಗ್ನಗೊಂಡಿದೆ. ನಂದಿಯ ಶಿಲ್ಪವು ಸರಳವಾಗಿ ಕೆತ್ತಲಾಗಿದೆ. ಈ ಶಿಲ್ಪವನ್ನು ನಿರ್ಮಿಸಲು ಗ್ರಾನೈಟ್ ಕಲ್ಲನ್ನು ಬಳಸಲಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಗ್ರಾನೈಟ್ ಶಿಲೆಯನ್ನು ದೇವಾಲಯದ ನಿರ್ಮಾಣಕ್ಕೆ ಬಳಸಿರುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಕುಡಿತಿನಿ, ಹಂಪಿ, ಸಿರಿವಾಳಗಳಲ್ಲಿ ರಾಷ್ಟ್ರಕೂಟರ ದೇವಾಲಯಗಳನ್ನು ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ.</p>.<p class="Subhead">ಕೋಣನತಲೆ: ದೇವಾಲಯದ ಅವಶೇಷಗಳಿರುವ ದಿಬ್ಬದ ಹಿಂಭಾಗದಲ್ಲಿ ಕೋಣನತಲೆಯ ಶಿಲ್ಪ ಕಂಡುಬರುತ್ತದೆ. ಈ ಶಿಲ್ಪ ಎರಡೂವರೆ ಅಡಿ ಉದ್ದ, ಒಂದೂವರೆ ಅಡಿ ಅಗಲ ಹೊಂದಿದೆ. ಕೋಣನ ಮುಖವನ್ನು ದಷ್ಟಪುಷ್ಟವಾಗಿ ಕೆತ್ತಲಾಗಿದೆ. ಕೋಣನ ಕಂಬಗಳು ಸಮಗಾತ್ರದಲ್ಲಿವೆ. ಕೋಣನ ತಲೆಯ ಕೆಳಭಾಗದಲ್ಲಿ ಕತ್ತಿಯನ್ನು ಹಿಡಿದಿರುವ ಶಿಲ್ಪಗಳ ಕೆತ್ತನೆಯನ್ನು ಮಾಡಲಾಗಿದೆ. ಕೋಣನ ತಲೆಯನ್ನು ದೇವಿಯ ಸಂಕೇತವಾಗಿ ಪೂಜಿಸಲಾಗುತ್ತದೆ.</p>.<p>ಈ ಮೇಲಿನ ಅವಶೇಷಗಳ ಆಧಾರದ ಮೇಲೆ ದಿಬ್ಬವಿರುವ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳಬಹುದು. ಈ ಪರಿಸರದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳನ್ನು ಆಧರಿಸಿ ಇದೊಂದು ಶೈವ ದೇವಾಲಯವೆಂದು ಗುರುತಿಸಬಹುದು. ದಿಬ್ಬದಲ್ಲಿ ದೊರೆತಿರುವ ದೇವಾಲಯದ ಅವಶೇಷಗಳ ಲಕ್ಷಣಗಳನ್ನು ಆಧರಿಸಿ ಈ ದೇವಾಲಯವು 7ರಿಂದ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ’ ಎಂದು ಡಾ.ಪ್ರವೀಣದೊಡ್ಡಗೌಡ ತಿಳಿಸಿದರು.</p>.<p>ಈ ಕ್ಷೇತ್ರ ಕಾರ್ಯದಲ್ಲಿ ಇತಿಹಾಸ ವಿದ್ಯಾರ್ಥಿಗಳಾದ ಕಾರ್ತಿಕ್, ಕಿರಣ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>