<p><strong>ದಾವಣಗೆರೆ:</strong> ಜಿಲ್ಲಾವಾರು ಜನನ ಪ್ರಮಾಣವನ್ನು ಅಂದಾಜಿಸಲು ಹಾಗೂ ನವಜಾತ ಶಿಶು ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮಗಳಿಗೆ‘ಇ-ಜನ್ಮ’ ನೋಂದಣಿ ಅವಶ್ಯಕ ಎಂದುಹೆಚ್ಚುವರಿ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿ ವೈ.ಎಂ.ರಾಜೇಶ್ವರಿ ಹೇಳಿದರು.</p>.<p>ಜನನ-ಮರಣ ನೋಂದಣಿ ನಿಯಮಗಳು ಹಾಗೂ ‘ಇ-ಜನ್ಮ’ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ವಿವಾಹ ವಯಸ್ಸಿನ ಅಧ್ಯಯನ, ಲಿಂಗಾನುಪಾತ ಅಂದಾಜು ಹಾಗೂ ಇನ್ನಿತರೆ ಜನಗಣತಿಯ ಪ್ರಮುಖ ಅಂಕಿ ಅಂಶಗಳನ್ನು ಪಡೆಯಲು ಹಾಗೂ ಯೋಜನೆಗಳನ್ನು ರೂಪಿಸಲು ನೋಂದಣಿ ಕಾರ್ಯ ಅವಶ್ಯಕ’ ಎಂದು ಹೇಳಿದರು.</p>.<p>‘ಜಿಲ್ಲೆಯಲ್ಲಿ 928 ಜನನ-ಮರಣ ನೋಂದಣಿ ಹಾಗೂ 114 ಉಪನೋಂದಣಿ ಘಟಕಗಳು ಸೇರಿ ಒಟ್ಟಾಗಿ 1,042 ಜನನ-ಮರಣ ನೋಂದಣಿ ಘಟಕಗಳಿವೆ. ಜನನ-ಮರಣ ಘಟನೆಗಳು ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿ ನೋಂದಣಿಯಾಗುತ್ತಿದ್ದು, ಜನರಿಗೆ ಸಕಾಲದಲ್ಲಿ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಈ ತಂತ್ರಾಂಶದ ವಿಶೇಷ’ ಎಂದರು.</p>.<p>‘ಆರೋಗ್ಯ ಸಂಸ್ಥೆಗಳು ಜನನ-ಮರಣ ಘಟನೆಗಳನ್ನು ತಡ ಮಾಡದೇ ಕಡ್ಡಾಯವಾಗಿ 21 ದಿನಗಳೊಳಗೆ ನೋಂದಣಿ ಮಾಡಬೇಕು. ಕಾನೂನು ವಿಭಾಗದ ದಾಖಲೆಗಳನ್ನು ತಮ್ಮ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ಜನನ-ಮರಣ ನೋಂದಣಾಧಿಕಾರಿಗೆ ಸಲ್ಲಿಸಬೇಕು’ ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಾಗೂ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಕಾರ್ಯಕ್ರಮ ಉದ್ಘಾಟಿಸಿದರು.‘ಜನನ-ಮರಣ ನೋಂದಣಿ ನಿಯಮಗಳು’ ಹಾಗೂ ‘ಇ-ಜನ್ಮ ತಂತ್ರಾಂಶ ನಿರ್ವಹಣಿ’ ಕುರಿತುಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ತರಬೇತಿ ನೀಡಿದರು.</p>.<p>ಮಹಾನಗರಪಾಲಿಕೆಯ ಜನನ-ಮರಣ ನೋಂದಣಾಧಿಕಾರಿ ಕೆ.ಎಲ್. ಧರಣೇಶ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಜಿಲ್ಲಾವಾರು ಜನನ ಪ್ರಮಾಣವನ್ನು ಅಂದಾಜಿಸಲು ಹಾಗೂ ನವಜಾತ ಶಿಶು ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮಗಳಿಗೆ‘ಇ-ಜನ್ಮ’ ನೋಂದಣಿ ಅವಶ್ಯಕ ಎಂದುಹೆಚ್ಚುವರಿ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿ ವೈ.ಎಂ.ರಾಜೇಶ್ವರಿ ಹೇಳಿದರು.</p>.<p>ಜನನ-ಮರಣ ನೋಂದಣಿ ನಿಯಮಗಳು ಹಾಗೂ ‘ಇ-ಜನ್ಮ’ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.</p>.<p>‘ವಿವಾಹ ವಯಸ್ಸಿನ ಅಧ್ಯಯನ, ಲಿಂಗಾನುಪಾತ ಅಂದಾಜು ಹಾಗೂ ಇನ್ನಿತರೆ ಜನಗಣತಿಯ ಪ್ರಮುಖ ಅಂಕಿ ಅಂಶಗಳನ್ನು ಪಡೆಯಲು ಹಾಗೂ ಯೋಜನೆಗಳನ್ನು ರೂಪಿಸಲು ನೋಂದಣಿ ಕಾರ್ಯ ಅವಶ್ಯಕ’ ಎಂದು ಹೇಳಿದರು.</p>.<p>‘ಜಿಲ್ಲೆಯಲ್ಲಿ 928 ಜನನ-ಮರಣ ನೋಂದಣಿ ಹಾಗೂ 114 ಉಪನೋಂದಣಿ ಘಟಕಗಳು ಸೇರಿ ಒಟ್ಟಾಗಿ 1,042 ಜನನ-ಮರಣ ನೋಂದಣಿ ಘಟಕಗಳಿವೆ. ಜನನ-ಮರಣ ಘಟನೆಗಳು ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿ ನೋಂದಣಿಯಾಗುತ್ತಿದ್ದು, ಜನರಿಗೆ ಸಕಾಲದಲ್ಲಿ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಈ ತಂತ್ರಾಂಶದ ವಿಶೇಷ’ ಎಂದರು.</p>.<p>‘ಆರೋಗ್ಯ ಸಂಸ್ಥೆಗಳು ಜನನ-ಮರಣ ಘಟನೆಗಳನ್ನು ತಡ ಮಾಡದೇ ಕಡ್ಡಾಯವಾಗಿ 21 ದಿನಗಳೊಳಗೆ ನೋಂದಣಿ ಮಾಡಬೇಕು. ಕಾನೂನು ವಿಭಾಗದ ದಾಖಲೆಗಳನ್ನು ತಮ್ಮ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ಜನನ-ಮರಣ ನೋಂದಣಾಧಿಕಾರಿಗೆ ಸಲ್ಲಿಸಬೇಕು’ ಎಂದರು.</p>.<p>ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಾಗೂ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಕಾರ್ಯಕ್ರಮ ಉದ್ಘಾಟಿಸಿದರು.‘ಜನನ-ಮರಣ ನೋಂದಣಿ ನಿಯಮಗಳು’ ಹಾಗೂ ‘ಇ-ಜನ್ಮ ತಂತ್ರಾಂಶ ನಿರ್ವಹಣಿ’ ಕುರಿತುಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ತರಬೇತಿ ನೀಡಿದರು.</p>.<p>ಮಹಾನಗರಪಾಲಿಕೆಯ ಜನನ-ಮರಣ ನೋಂದಣಾಧಿಕಾರಿ ಕೆ.ಎಲ್. ಧರಣೇಶ್ ಅವರೂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>