<p><strong>ಸಂತೇಬೆನ್ನೂರು:</strong> ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಹಣ ಪಾವತಿಸಲು ಕೌಂಟರ್ ಎದುರು ಸರದಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊನ್ನರ ಬ್ಯಾಗ್ ಕತ್ತರಿಸಿ ₹ 1 ಲಕ್ಷ ದೋಚಿದ್ದಾರೆ.</p>.<p>ಸಮೀಪದ ತಣಿಗೆರೆ ಗ್ರಾಮದ ಮಹಿಳೆ ಲತಾ ಎಂಬುವರು ಚಿನ್ನದ ಸಾಲ ಮರು ನವೀಕರಣ ಮಾಡಲು ₹ 3.5 ಲಕ್ಷ ಹಣವನ್ನು ಸಾರಿ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿದ್ದರು. ಇದನ್ನು ಗಮನಿಸಿದ ಕಳ್ಳಿಯರ ತಂಡ ಹಣದ ಚೀಲವನ್ನು ಬ್ಲೇಡ್ನಿಂದ ಕೊಯ್ದಿದ್ದಾರೆ. ಅದರಲ್ಲಿದ್ದ ಎರಡು ಕಂತೆ (₹ 1 ಲಕ್ಷ) ಕದ್ದಿದ್ದಾರೆ. ಕದ್ದ ಹಣವನ್ನು ತೆಗೆದು ಒಬ್ಬ ಮಹಿಳೆ ಅಲ್ಲಿಂದ ಪರಾರಿ ಆಗಿದ್ದಾರೆ. ಹಣದ ಚೀಲದ ಭಾರ ಕಡಿಮೆಯಾದ ಅನುಭವವಾದ ತಕ್ಷಣ ಲತಾ ಬ್ಯಾಗ್ ನೋಡಿಕೊಂಡಿದ್ದಾರೆ. ಹಣ ಕದ್ದಿದ್ದಾರೆ ಎಂದಾಕ್ಷಣ ಗ್ರಾಹಕರು ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. </p>.<p>ಇಬ್ಬರೂ ಮಧ್ಯ ಪ್ರದೇಶದ ಮೂಲದವರು. ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಹಣದೊಂದಿಗೆ ಪರಾರಿಯಾದ ಮಹಿಳೆಗಾಗಿ ಶೋಧ ನಡೆಸಿದ್ದಾರೆ.</p>.<p>ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು:</strong> ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಹಣ ಪಾವತಿಸಲು ಕೌಂಟರ್ ಎದುರು ಸರದಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊನ್ನರ ಬ್ಯಾಗ್ ಕತ್ತರಿಸಿ ₹ 1 ಲಕ್ಷ ದೋಚಿದ್ದಾರೆ.</p>.<p>ಸಮೀಪದ ತಣಿಗೆರೆ ಗ್ರಾಮದ ಮಹಿಳೆ ಲತಾ ಎಂಬುವರು ಚಿನ್ನದ ಸಾಲ ಮರು ನವೀಕರಣ ಮಾಡಲು ₹ 3.5 ಲಕ್ಷ ಹಣವನ್ನು ಸಾರಿ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದಿದ್ದರು. ಇದನ್ನು ಗಮನಿಸಿದ ಕಳ್ಳಿಯರ ತಂಡ ಹಣದ ಚೀಲವನ್ನು ಬ್ಲೇಡ್ನಿಂದ ಕೊಯ್ದಿದ್ದಾರೆ. ಅದರಲ್ಲಿದ್ದ ಎರಡು ಕಂತೆ (₹ 1 ಲಕ್ಷ) ಕದ್ದಿದ್ದಾರೆ. ಕದ್ದ ಹಣವನ್ನು ತೆಗೆದು ಒಬ್ಬ ಮಹಿಳೆ ಅಲ್ಲಿಂದ ಪರಾರಿ ಆಗಿದ್ದಾರೆ. ಹಣದ ಚೀಲದ ಭಾರ ಕಡಿಮೆಯಾದ ಅನುಭವವಾದ ತಕ್ಷಣ ಲತಾ ಬ್ಯಾಗ್ ನೋಡಿಕೊಂಡಿದ್ದಾರೆ. ಹಣ ಕದ್ದಿದ್ದಾರೆ ಎಂದಾಕ್ಷಣ ಗ್ರಾಹಕರು ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. </p>.<p>ಇಬ್ಬರೂ ಮಧ್ಯ ಪ್ರದೇಶದ ಮೂಲದವರು. ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಹಣದೊಂದಿಗೆ ಪರಾರಿಯಾದ ಮಹಿಳೆಗಾಗಿ ಶೋಧ ನಡೆಸಿದ್ದಾರೆ.</p>.<p>ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>