ಬಿ.ಸಿ. ಪಾಟೀಲ ಹೇಳಿಕೆ: ಜಿಎಂಐಟಿಯಲ್ಲಿ ಮುಖಂಡರ ಜತೆಗೆ ಚರ್ಚೆ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಧಾನಸಭಾ ಉಪ ಚುನಾವಣೆ ಎದುರಿಸುವ ಬಗ್ಗೆ ಮಾತುಕತೆಗಳಾದವು. ಅಭ್ಯರ್ಥಿಗಳು, ಉಸ್ತುವಾರಿಗಳು, ಸಂಸದರು ಬಂದಿದ್ದರು. ಮುಖ್ಯಮಂತ್ರಿ ಅ. 17, 21, 22, 26 ಹಾಗೂ 27ರಂದು ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.