<p><strong>ಕಡರನಾಯ್ಕನಹಳ್ಳಿ:</strong> ಸಾಧನೆಗೆ ಗುರುವೇ ಬುನಾದಿ ಎಂದು ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಎಲ್ಲಾ ಕಾಲದಲ್ಲೂ ಒಳ್ಳೆಯದು, ಕೆಟ್ಟದ್ದು ಇತ್ತು. ಕಾಲ ಕೆಟ್ಟಿಲ್ಲ ನಮ್ಮ ಮನಸ್ಥಿತಿ ಬದಲಾಗಿದೆ. ವಿದ್ಯೆಯ ಜೊತೆಗೆ ಸಂಸ್ಕಾರವಿರಬೇಕು, ಆಗ ಮನುಷ್ಯ ಒಳಿತನ್ನು ಅನುಸರಿಸುತ್ತಾನೆ ಎಂದು ಆಶೀರ್ವಚನ ನೀಡಿದರು.</p>.<p>ಮನುಷ್ಯ ಸುಖವನ್ನು ಮಾತ್ರ ಬಯಸುತ್ತಾನೆ. ಸುಖ ಪ್ರಾಮಾಣಿಕ ಕಾಯಕ ನಿಷ್ಠೆಯಿಂದ ಲಭಿಸುತ್ತದೆ ಎಂಬುದನ್ನು ಸತ್ಸಂಗ ತಿಳಿಸುತ್ತದೆ ಎಂದು ಆದ್ಯಾತ್ಮ ಚಿಂತಕ ಡಿ. ಸಿದ್ದೇಶ್ ತಿಳಿಸಿದರು.</p>.<p>ಶಿವಶರಣರ ಸಂಘ ಸುಜ್ಞಾನ ಬಿತ್ತುತ್ತದೆ. ನಾಲ್ಕು ಯುಗಗಳಲ್ಲೂ ಒಳ್ಳೆಯದೇ ಗೆದ್ದಿದೆ ಎಂದು ಕುಂಬಳೂರು ಹನುಮಂತಪ್ಪ ಹೇಳಿದರು.</p>.<p>ಸತ್ಸಂಗ ಪ್ರಸಾದ ದಾನಿಗಳಾದ ಕೂಲಂಬಿ ಮಹಾದೇವಪ್ಪ, ಮಾಕನೂರು ಹೊನ್ನಪ್ಪ ಮಾತನಾಡಿದರು. ನಂತರ ಶ್ರೀಗಳ ಕಿರೀಟ ಪೂಜೆ ವಿಜೃಂಭಣೆಯಿಂದ ನಡೆಯಿತು. </p>.<p>ಭಜನಾ ಮಂಡಳಿಯಿಂದ ಸಿದ್ದಾರೂಢ ಭಜನಾ ಹಾಡುಗಳು ಕೇಳಿಬಂದವು. ಕುಂಬಳೂರು ಕುಬೇರಪ್ಪ ಮತ್ತು ಸಿರಿಗೆರೆ ವೆಂಕಟೇಶ್ ಅವರಿಂದ ವಚನ ಗಾಯನ ನಡೆಯಿತು.</p>.<p>ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಸೇರಿದ್ದು, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಎಸ್ಎಸ್ಬಿನ್ ಮುಖ್ಯ ಕಾರ್ಯನಿವಾಹಕ ಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ನಿವೃತ್ತ ಸುಬೇದಾರ್ ಶಿವಕುಮಾರ್, ಮಲ್ಲಾಡ್ ಕೃಷ್ಣಪ್ಪ, ಮಾಗೋಡು ಸಿದ್ದಪ್ಪ, ಹೊಸಮನಿ ಮಲ್ಲಪ್ಪ, ಡಿ ರಾಜಪ್ಪ, ಹೊರಟ್ಟಿ ಕರಿಬಸಪ್ಪ, ರೇವಣಸಿದ್ದಯ್ಯ, ಭಾವಿಕಟ್ಟಿ ಮಲ್ಲೇಶಪ್ಪ, ಹನುಮಂತ ಗೌಡ, ರೇವಣಸಿದ್ದಯ್ಯ, ಪತ್ರಕರ್ತ ಜಿಗಳಿ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ:</strong> ಸಾಧನೆಗೆ ಗುರುವೇ ಬುನಾದಿ ಎಂದು ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಹೇಳಿದರು.</p>.<p>ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಎಲ್ಲಾ ಕಾಲದಲ್ಲೂ ಒಳ್ಳೆಯದು, ಕೆಟ್ಟದ್ದು ಇತ್ತು. ಕಾಲ ಕೆಟ್ಟಿಲ್ಲ ನಮ್ಮ ಮನಸ್ಥಿತಿ ಬದಲಾಗಿದೆ. ವಿದ್ಯೆಯ ಜೊತೆಗೆ ಸಂಸ್ಕಾರವಿರಬೇಕು, ಆಗ ಮನುಷ್ಯ ಒಳಿತನ್ನು ಅನುಸರಿಸುತ್ತಾನೆ ಎಂದು ಆಶೀರ್ವಚನ ನೀಡಿದರು.</p>.<p>ಮನುಷ್ಯ ಸುಖವನ್ನು ಮಾತ್ರ ಬಯಸುತ್ತಾನೆ. ಸುಖ ಪ್ರಾಮಾಣಿಕ ಕಾಯಕ ನಿಷ್ಠೆಯಿಂದ ಲಭಿಸುತ್ತದೆ ಎಂಬುದನ್ನು ಸತ್ಸಂಗ ತಿಳಿಸುತ್ತದೆ ಎಂದು ಆದ್ಯಾತ್ಮ ಚಿಂತಕ ಡಿ. ಸಿದ್ದೇಶ್ ತಿಳಿಸಿದರು.</p>.<p>ಶಿವಶರಣರ ಸಂಘ ಸುಜ್ಞಾನ ಬಿತ್ತುತ್ತದೆ. ನಾಲ್ಕು ಯುಗಗಳಲ್ಲೂ ಒಳ್ಳೆಯದೇ ಗೆದ್ದಿದೆ ಎಂದು ಕುಂಬಳೂರು ಹನುಮಂತಪ್ಪ ಹೇಳಿದರು.</p>.<p>ಸತ್ಸಂಗ ಪ್ರಸಾದ ದಾನಿಗಳಾದ ಕೂಲಂಬಿ ಮಹಾದೇವಪ್ಪ, ಮಾಕನೂರು ಹೊನ್ನಪ್ಪ ಮಾತನಾಡಿದರು. ನಂತರ ಶ್ರೀಗಳ ಕಿರೀಟ ಪೂಜೆ ವಿಜೃಂಭಣೆಯಿಂದ ನಡೆಯಿತು. </p>.<p>ಭಜನಾ ಮಂಡಳಿಯಿಂದ ಸಿದ್ದಾರೂಢ ಭಜನಾ ಹಾಡುಗಳು ಕೇಳಿಬಂದವು. ಕುಂಬಳೂರು ಕುಬೇರಪ್ಪ ಮತ್ತು ಸಿರಿಗೆರೆ ವೆಂಕಟೇಶ್ ಅವರಿಂದ ವಚನ ಗಾಯನ ನಡೆಯಿತು.</p>.<p>ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಸೇರಿದ್ದು, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಎಸ್ಎಸ್ಬಿನ್ ಮುಖ್ಯ ಕಾರ್ಯನಿವಾಹಕ ಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ನಿವೃತ್ತ ಸುಬೇದಾರ್ ಶಿವಕುಮಾರ್, ಮಲ್ಲಾಡ್ ಕೃಷ್ಣಪ್ಪ, ಮಾಗೋಡು ಸಿದ್ದಪ್ಪ, ಹೊಸಮನಿ ಮಲ್ಲಪ್ಪ, ಡಿ ರಾಜಪ್ಪ, ಹೊರಟ್ಟಿ ಕರಿಬಸಪ್ಪ, ರೇವಣಸಿದ್ದಯ್ಯ, ಭಾವಿಕಟ್ಟಿ ಮಲ್ಲೇಶಪ್ಪ, ಹನುಮಂತ ಗೌಡ, ರೇವಣಸಿದ್ದಯ್ಯ, ಪತ್ರಕರ್ತ ಜಿಗಳಿ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>