<p><strong>ಬಸವಾಪಟ್ಟಣ:</strong> ಸಮೀಪದ ಹರೋಸಾಗರದ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಗೆ ಕಿಡಿಗೇಡಿಗಳು ವಿಷಪೂರಿತ ದ್ರಾವಣ ಸಿಂಪಡಣೆ ಮಾಡಿರುವುದರಿಂದ 2.75 ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಹಾಳಾಗಿದೆ ಎಂದು ದೇಗುಲ ಸಮಿತಿಯ ಸದಸ್ಯರು ದೂರಿದ್ದಾರೆ.</p>.<p>ಗ್ರಾಮದ ಬಸವೇಶ್ವರಸ್ವಾಮಿ ದೇಗುಲಕ್ಕೆ ಸೇರಿದ ಗದ್ದೆಯನ್ನು ಚಿರಡೋಣಿಯ ಹಾಲೇಶ್ ಅವರಿಗೆ ಗುತ್ತಿಗೆಗೆ ನೀಡಿದ್ದೆವು. ಒಂದೂವರೆ ತಿಂಗಳ ಹಿಂದೆ ಹಾಲೇಶ್ ಅವರು ಆರ್ಎನ್ಆರ್ ತಳಿಯ ಭತ್ತದ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ, ಕಿಡಿಗೇಡಿಗಳು ಆ ಬೆಳೆಗೆ ವಿಷ ಹಾಕಿರುವುದರಿಂದ ಬೆಳೆ ಒಣಗಲಾರಂಭಿಸಿದೆ. ರೈತನಿಗೂ ಮತ್ತು ದೇಗುಲಕ್ಕೂ ನಷ್ಟವಾಗಿದೆ. ಭತ್ತದ ಸಸಿಗಳ ಸುಳಿಯಲ್ಲಿ ವಿಷ ಬಿದ್ದಿರುವುದರಿಂದ ಸಸಿಗಳು ಚೇತರಿಸಿ ಕೊಳ್ಳುವುದಿಲ್ಲ. ಒಂದು ವಾರದಲ್ಲಿ ಸಂಪೂರ್ಣ ಒಣಗುತ್ತವೆ. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದು ದೇಗುಲ ಸಮಿತಿಯ ಸದಸ್ಯರಾದ ವೈ.ಬಿ.ನಾಗರಾಜ್, ಪಿ.ಜಿ.ಮಂಜುನಾಥ್, ಎನ್.ಬಿ.ಹಾಲೇಶ್, ಎನ್.ಲಿಂಗರಾಜ್, ಎ.ಕೆ.ರಂಗಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ:</strong> ಸಮೀಪದ ಹರೋಸಾಗರದ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಗದ್ದೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆಗೆ ಕಿಡಿಗೇಡಿಗಳು ವಿಷಪೂರಿತ ದ್ರಾವಣ ಸಿಂಪಡಣೆ ಮಾಡಿರುವುದರಿಂದ 2.75 ಎಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲು ಹಾಳಾಗಿದೆ ಎಂದು ದೇಗುಲ ಸಮಿತಿಯ ಸದಸ್ಯರು ದೂರಿದ್ದಾರೆ.</p>.<p>ಗ್ರಾಮದ ಬಸವೇಶ್ವರಸ್ವಾಮಿ ದೇಗುಲಕ್ಕೆ ಸೇರಿದ ಗದ್ದೆಯನ್ನು ಚಿರಡೋಣಿಯ ಹಾಲೇಶ್ ಅವರಿಗೆ ಗುತ್ತಿಗೆಗೆ ನೀಡಿದ್ದೆವು. ಒಂದೂವರೆ ತಿಂಗಳ ಹಿಂದೆ ಹಾಲೇಶ್ ಅವರು ಆರ್ಎನ್ಆರ್ ತಳಿಯ ಭತ್ತದ ಸಸಿಗಳನ್ನು ನಾಟಿ ಮಾಡಿದ್ದರು. ಆದರೆ, ಕಿಡಿಗೇಡಿಗಳು ಆ ಬೆಳೆಗೆ ವಿಷ ಹಾಕಿರುವುದರಿಂದ ಬೆಳೆ ಒಣಗಲಾರಂಭಿಸಿದೆ. ರೈತನಿಗೂ ಮತ್ತು ದೇಗುಲಕ್ಕೂ ನಷ್ಟವಾಗಿದೆ. ಭತ್ತದ ಸಸಿಗಳ ಸುಳಿಯಲ್ಲಿ ವಿಷ ಬಿದ್ದಿರುವುದರಿಂದ ಸಸಿಗಳು ಚೇತರಿಸಿ ಕೊಳ್ಳುವುದಿಲ್ಲ. ಒಂದು ವಾರದಲ್ಲಿ ಸಂಪೂರ್ಣ ಒಣಗುತ್ತವೆ. ಈ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ’ ಎಂದು ದೇಗುಲ ಸಮಿತಿಯ ಸದಸ್ಯರಾದ ವೈ.ಬಿ.ನಾಗರಾಜ್, ಪಿ.ಜಿ.ಮಂಜುನಾಥ್, ಎನ್.ಬಿ.ಹಾಲೇಶ್, ಎನ್.ಲಿಂಗರಾಜ್, ಎ.ಕೆ.ರಂಗಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>