ಲಾಕ್ಡೌನ್ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಅಶೋಕ ರಸ್ತೆ, ಪ್ರವಾಸಿ ಮಂದಿರ ರಸ್ತೆ, ಹದಡಿ ರಸ್ತೆ, ಹಳೆ ಪಿಬಿ ರಸ್ತೆ, ಮಂಡಿಪೇಟೆ, ವಿಜಯಲಕ್ಷ್ಮಿ ರಸ್ತೆ, ಗಡಿಯಾರದ ಕಂಬ, ವಿದ್ಯಾನಗರ ಮುಖ್ಯ ರಸ್ತೆ, ಶಾಮನೂರು ರಸ್ತೆ, ವಿದ್ಯಾರ್ಥಿ ಭವನ ಸೇರಿ ಇತರೆ ಭಾಗಗಳಲ್ಲಿ ಅಂಗಡಿಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ಎಪಿಎಂಸಿಯಲ್ಲಿ ಎಂದಿನಂತೆ ತರಕಾರಿ, ಹೂವು, ಹಣ್ಣು ಇತರೆ ಅಗತ್ಯ ವಸ್ತುಗಳ ವಹಿವಾಟು ನಡೆಯಿತು.
ನಗರದ ಕೆ.ಆರ್.ಮಾರುಕಟ್ಟೆ, ಗಡಿಯಾರದ ಕಂಬದ ಬಳಿ ತರಕಾರಿ ಅಂಗಡಿಗಳು ತೆರೆದಿದ್ದರೂ ಭಾನುವಾರದ ಖರೀದಿ ಭರಾಟೆ ಇರಲಿಲ್ಲ. ವಿನೋಬನಗರ 2ನೇ ಮುಖ್ಯ ರಸ್ತೆ, ಭಾರತ್ ಕಾಲೋನಿ, ಡಾಂಗೆಪಾರ್ಕ್, ಕೆಟಿಜೆ ನಗರದ ಮಾಂಸದ ಅಂಗಡಿಗಳಲ್ಲಿ ಶ್ರಾವಣ ಮಾಸವಾದ್ದರಿಂದ ಗಿಜಿಗುಡುವ ವಾತಾವರಣ ಇರಲಿಲ್ಲ.