‘ಕೆರೆಯಲ್ಲಿ ಹೂಳು ತುಂಬಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಗ್ಗಿತ್ತು. ಕೆರೆ ಸಂಜೀವಿನ ಯೋಜನೆ ಅಡಿಯಲ್ಲಿ ಹೂಳು ತೆಗೆಯಲಾಗಿತ್ತು. ಕಳೆದ ಬೇಸಿಗೆಯಲ್ಲಿ ಸುತ್ತಮುತ್ತಲ ಗ್ರಾಮದ ರೈತರು ನೂರಾರು ಟ್ರ್ಯಾಕ್ಟರ್ನಲ್ಲಿ ಕೆರೆಯ ಮಣ್ಣನ್ನು ಹೊಲ, ತೋಟಗಳಿಗೆ ಸಾಗಿಸಿದರು. ನಿತ್ಯ ಜೆಸಿಬಿ ಯಂತ್ರಗಳಿಂದ ಮಣ್ಣು ಅಗೆಯುವ ಕೆಲಸ ನಡೆಯಿತು. ವ್ಯವಸ್ಥಿತವಾಗಿ ಹೂಳು ಎತ್ತಿದ ಪರಿಣಾಮ ಕೆರೆಯ ಆಳ, ಅಗಲ ವಿಸ್ತಾರವಾಯಿತು’ ಎನ್ನುತ್ತಾರೆ ಗೊಲ್ಲರಹಳ್ಳಿ ರುದ್ರಪ್ಪ, ಬಸವರಾಜ್.