<p><strong>ದಾವಣಗೆರೆ:</strong> ‘ವಿಜ್ಞಾನದಲ್ಲಿನ ಆವಿಷ್ಕಾರಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತವೆ ಎಂಬ ಪ್ರಶ್ನೆ ಮೂಡುತ್ತಿದೆ. ವಿಜ್ಞಾನ ಇಂದು ನಾಗರಿಕತೆ ಬಗೆಗಿನ ಪ್ರಶ್ನೆ ಕೇಳುವಂತೆ ಮಾಡಿದೆ’ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.</p>.<p>ನಗರದ ಡಿಆರ್ಎಂ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ರಿಸೆಂಟ್ ಅಡ್ವಾನ್ಸಸ್ ಇನ್ ಸಾಲಿಡ್ ಸ್ಕೇಟ್ ಫಿಸಿಕ್ಸ್ ಅಂಡ್ ಇಟ್ಸ್ ಅಪ್ಲಿಕೇಷನ್’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.</p>.<p>ವಿಜ್ಞಾನ ಜಾಗತಿಕ ವಿಷಯವಾದ ಕಾರಣ ವಿವಿಧ ದೇಶಗಳ ಸಂಸ್ಕೃತಿಯಲ್ಲಿನ ವೈವಿಧ್ಯತೆಯ ಆಳವಾದ ಅಧ್ಯಯನ ಅಗತ್ಯ. ಯಶಸ್ಸು ಪಡೆಯುತ್ತಾ ಹೋದಂತೆಲ್ಲಾ ವಿಜ್ಞಾನ ಅಹಂಕಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಹೇಳಿದರು.</p>.<p>‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಂದು ಹೆಚ್ಚಿನ ಕ್ರಾಂತಿ ಮಾಡಿದೆ. ಅಲ್ಲದೇ ಅದು ಕೆಲ ಮಿತಿಯನ್ನೂ ಹೊಂದಿದೆ. ಕಂಪ್ಯೂಟರ್ಗಳಿಗೆ ಮಾನವನೇ ನಿರ್ದೇಶನ ನೀಡಬೇಕು. ಭಾವನೆಗಳ ಬಗ್ಗೆ ಕಂಪ್ಯೂಟರ್ ಅರಿಯಲು ಸಾಧ್ಯವಿಲ್ಲ. ಕವಿಯೊಬ್ಬನ ಸುಂದರ ವಾಕ್ಯವನ್ನು ನಾವು ಗ್ರಹಿಸಿ, ರೂಪಾಂತರಿಸಿದಂತೆ ಕಂಪ್ಯೂಟರ್ಗೆ ಸಾಧ್ಯವಿಲ್ಲ’ ಎಂದರು.</p>.<p>‘ಕರ್ನಾಟಕದಲ್ಲಿ ಶಾಸ್ತ್ರೀಯ ಕನ್ನಡ ಸಾಹಿತ್ಯದ ಬಗ್ಗೆ ಸ್ವಲ್ಪ ಅರಿವು ಇದೆ. ಆದರೆ ಶಾಸ್ತ್ರೀಯವಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿದ ಎಷ್ಟು ಜನ ವಿದ್ವಾಂಸರು ಇದ್ದಾರೆ. ಷೇಕ್ಸ್ಪಿಯರ್ ಇನ್ನೂ ಜೀವಂತವಾಗಿರುವುದಕ್ಕೆ ಇಂಗ್ಲೆಂಡ್ ಸರ್ಕಾರ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಮಾಡಿದ ಕೆಲ ನೀತಿಗಳು ಕಾರಣ. ಈ ತರಹದ ಕೆಲಸ ನಮ್ಮಲ್ಲಿ ಆಗಲಿಲ್ಲ’ ಎಂದು ವಿಶ್ಲೇಷಿಸಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ, ‘ಅಧ್ಯಯನ, ಅಧ್ಯಾಪನ, ಸಂಶೋಧನೆ ಅಧ್ಯಾಪಕರು ಮಾಡಬೇಕಾದ ಮೂರು ಮುಖ್ಯ ಕೆಲಸ. ಇಂತಹ ವಿಚಾರಸಂಕಿರಣಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಇತರ ವಿಷಯಗಳ ತಿಳಿವಳಿಕೆ ನೀಡುವುದು ಮುಖ್ಯ’ ಎಂದರು.</p>.<p>‘ವಿಜ್ಞಾನದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಯಾದಂತೆಲ್ಲಾ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಹೊಸ ಆವಿಷ್ಕಾರಗಳು ನಮಗೆ ಸಮಸ್ಯೆಯಾಗದಂತಿರಬೇಕು. ವಿಜ್ಞಾನ ವಿವೇಕವನ್ನು ಉಳಿಸುವುದರ ಜೊತೆ ಹೆಚ್ಚು ಸಮಾಜಮುಖಿಯಾಗಬೇಕು’ ಎಂದು ಹೇಳಿದರು.</p>.<p>ಬಿಐಇಟಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್.ವಿ.,‘ ಹೊಸ ಜೀವನಕ್ಕೆ ವಿಜ್ಞಾನ ಬೇಕು. ಆದರೆ ಅದರಲ್ಲಿ ಮಿತಿ ಇರಬೇಕು. ವಿಜ್ಞಾನ ಹೆಚ್ಚು ಅಡ್ವಾನ್ಸಡ್ ಆದಾಗ ಆತಂಕ ತರುತ್ತಿದೆ. ಸಮಾಜಕ್ಕೆ ಅಗತ್ಯ ಇರುವ ಸಂಶೋಧನೆಗಳು ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ನಿವೃತ್ತ ಪ್ರಾಧ್ಯಾಪಕ ಪಿ. ಪರಶುರಾಮ, ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್. ನಾಗರತ್ನಮ್ಮ, ಪ್ರಾಧ್ಯಾಪಕರಾದ ಡಾ. ಜಿ. ಉಮೇಶ್, ಡಾ. ಆರ್. ಸೋಮಶೇಖರ್, ಕಮಲಾ ಸೊಪ್ಪಿನ್, ಡಾ.ಎಸ್. ಆರ್. ಗೋಪಾಲಕೃಷ್ಣ ನಾಯಕ್, ಎಚ್. ಬಸವರಾಜಪ್ಪ ಇದ್ದರು.</p>.<p>ಪ್ರಾಧ್ಯಾಪಕಿ ಶೋಭಾ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಪಿ. ರೂಪಶ್ರೀ ಸ್ವಾಗತಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ವಿಜ್ಞಾನದಲ್ಲಿನ ಆವಿಷ್ಕಾರಗಳು ನಮ್ಮನ್ನು ಎತ್ತ ಕೊಂಡೊಯ್ಯುತ್ತವೆ ಎಂಬ ಪ್ರಶ್ನೆ ಮೂಡುತ್ತಿದೆ. ವಿಜ್ಞಾನ ಇಂದು ನಾಗರಿಕತೆ ಬಗೆಗಿನ ಪ್ರಶ್ನೆ ಕೇಳುವಂತೆ ಮಾಡಿದೆ’ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.</p>.<p>ನಗರದ ಡಿಆರ್ಎಂ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ರಿಸೆಂಟ್ ಅಡ್ವಾನ್ಸಸ್ ಇನ್ ಸಾಲಿಡ್ ಸ್ಕೇಟ್ ಫಿಸಿಕ್ಸ್ ಅಂಡ್ ಇಟ್ಸ್ ಅಪ್ಲಿಕೇಷನ್’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.</p>.<p>ವಿಜ್ಞಾನ ಜಾಗತಿಕ ವಿಷಯವಾದ ಕಾರಣ ವಿವಿಧ ದೇಶಗಳ ಸಂಸ್ಕೃತಿಯಲ್ಲಿನ ವೈವಿಧ್ಯತೆಯ ಆಳವಾದ ಅಧ್ಯಯನ ಅಗತ್ಯ. ಯಶಸ್ಸು ಪಡೆಯುತ್ತಾ ಹೋದಂತೆಲ್ಲಾ ವಿಜ್ಞಾನ ಅಹಂಕಾರಿಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ ಎಂದು ಹೇಳಿದರು.</p>.<p>‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಂದು ಹೆಚ್ಚಿನ ಕ್ರಾಂತಿ ಮಾಡಿದೆ. ಅಲ್ಲದೇ ಅದು ಕೆಲ ಮಿತಿಯನ್ನೂ ಹೊಂದಿದೆ. ಕಂಪ್ಯೂಟರ್ಗಳಿಗೆ ಮಾನವನೇ ನಿರ್ದೇಶನ ನೀಡಬೇಕು. ಭಾವನೆಗಳ ಬಗ್ಗೆ ಕಂಪ್ಯೂಟರ್ ಅರಿಯಲು ಸಾಧ್ಯವಿಲ್ಲ. ಕವಿಯೊಬ್ಬನ ಸುಂದರ ವಾಕ್ಯವನ್ನು ನಾವು ಗ್ರಹಿಸಿ, ರೂಪಾಂತರಿಸಿದಂತೆ ಕಂಪ್ಯೂಟರ್ಗೆ ಸಾಧ್ಯವಿಲ್ಲ’ ಎಂದರು.</p>.<p>‘ಕರ್ನಾಟಕದಲ್ಲಿ ಶಾಸ್ತ್ರೀಯ ಕನ್ನಡ ಸಾಹಿತ್ಯದ ಬಗ್ಗೆ ಸ್ವಲ್ಪ ಅರಿವು ಇದೆ. ಆದರೆ ಶಾಸ್ತ್ರೀಯವಾಗಿ ಸಂಸ್ಕೃತವನ್ನು ಅಧ್ಯಯನ ಮಾಡಿದ ಎಷ್ಟು ಜನ ವಿದ್ವಾಂಸರು ಇದ್ದಾರೆ. ಷೇಕ್ಸ್ಪಿಯರ್ ಇನ್ನೂ ಜೀವಂತವಾಗಿರುವುದಕ್ಕೆ ಇಂಗ್ಲೆಂಡ್ ಸರ್ಕಾರ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಮಾಡಿದ ಕೆಲ ನೀತಿಗಳು ಕಾರಣ. ಈ ತರಹದ ಕೆಲಸ ನಮ್ಮಲ್ಲಿ ಆಗಲಿಲ್ಲ’ ಎಂದು ವಿಶ್ಲೇಷಿಸಿದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ, ‘ಅಧ್ಯಯನ, ಅಧ್ಯಾಪನ, ಸಂಶೋಧನೆ ಅಧ್ಯಾಪಕರು ಮಾಡಬೇಕಾದ ಮೂರು ಮುಖ್ಯ ಕೆಲಸ. ಇಂತಹ ವಿಚಾರಸಂಕಿರಣಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಇತರ ವಿಷಯಗಳ ತಿಳಿವಳಿಕೆ ನೀಡುವುದು ಮುಖ್ಯ’ ಎಂದರು.</p>.<p>‘ವಿಜ್ಞಾನದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಯಾದಂತೆಲ್ಲಾ ನಾವು ಎತ್ತ ಸಾಗುತ್ತಿದ್ದೇವೆ ಎಂಬ ಭಯ ನಮ್ಮನ್ನು ಕಾಡುತ್ತಿದೆ. ಹೊಸ ಆವಿಷ್ಕಾರಗಳು ನಮಗೆ ಸಮಸ್ಯೆಯಾಗದಂತಿರಬೇಕು. ವಿಜ್ಞಾನ ವಿವೇಕವನ್ನು ಉಳಿಸುವುದರ ಜೊತೆ ಹೆಚ್ಚು ಸಮಾಜಮುಖಿಯಾಗಬೇಕು’ ಎಂದು ಹೇಳಿದರು.</p>.<p>ಬಿಐಇಟಿ ಎಂಬಿಎ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಎಚ್.ವಿ.,‘ ಹೊಸ ಜೀವನಕ್ಕೆ ವಿಜ್ಞಾನ ಬೇಕು. ಆದರೆ ಅದರಲ್ಲಿ ಮಿತಿ ಇರಬೇಕು. ವಿಜ್ಞಾನ ಹೆಚ್ಚು ಅಡ್ವಾನ್ಸಡ್ ಆದಾಗ ಆತಂಕ ತರುತ್ತಿದೆ. ಸಮಾಜಕ್ಕೆ ಅಗತ್ಯ ಇರುವ ಸಂಶೋಧನೆಗಳು ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ನಿವೃತ್ತ ಪ್ರಾಧ್ಯಾಪಕ ಪಿ. ಪರಶುರಾಮ, ಕಾಲೇಜಿನ ಪ್ರಾಚಾರ್ಯರಾದ ಬಿ.ಎಸ್. ನಾಗರತ್ನಮ್ಮ, ಪ್ರಾಧ್ಯಾಪಕರಾದ ಡಾ. ಜಿ. ಉಮೇಶ್, ಡಾ. ಆರ್. ಸೋಮಶೇಖರ್, ಕಮಲಾ ಸೊಪ್ಪಿನ್, ಡಾ.ಎಸ್. ಆರ್. ಗೋಪಾಲಕೃಷ್ಣ ನಾಯಕ್, ಎಚ್. ಬಸವರಾಜಪ್ಪ ಇದ್ದರು.</p>.<p>ಪ್ರಾಧ್ಯಾಪಕಿ ಶೋಭಾ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಪಿ. ರೂಪಶ್ರೀ ಸ್ವಾಗತಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>