<p><strong>ಹರಿಹರ:</strong> ಗುತ್ತಿಗೆದಾರರಿಂದ ಮೂರು ತಿಂಗಳ ವೇತನ ಪಾವತಿ ಮಾಡದ್ದರಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ನೌಕರರ ಸಂಘದಿಂದ ಸೋಮವಾರ ಸಾಂಕೇತಿಕ ಧರಣಿ ನಡೆಸಲಾಯಿತು.</p>.<p>‘ಆ. 11ರಂದು ರಾಯಚೂರಿನ ದೀಕ್ಷಾ ಕನ್ಸಲ್ಟೆನ್ಸಿ ಸಂಸ್ಥೆಯು ಗುತ್ತಿಗೆ ಪಡೆದಿದೆ. ಆಗಸ್ಟ್ ತಿಂಗಳ 21 ದಿನದ ವೇತನ ಪಾವತಿಸಿದ್ದು ಬಿಟ್ಟರೆ, ಇದುವರೆಗೂ ಯಾವುದೇ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ’ ಎಂದು ಸಂಘದ ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ ದೂರಿದರು.</p>.<p>‘ಸಿಬ್ಬಂದಿ ಪಿಎಫ್ ಮತ್ತು ಇಎಸ್ಐ ಸೌಲಭ್ಯದ ಕಂತುಗಳನ್ನು ಜಮಾ ಮಾಡಿರುವರೋ ಇಲ್ಲವೋ, ಎಷ್ಟು ಜಮಾ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ಗುತ್ತಿಗೆದಾರರು ನೀಡುವುಲ್ಲ. ಕೂಡಲೇ ಅವರು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ವೇತನವಿಲ್ಲದೆ ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಗುತ್ತಿಗೆದಾರರು ವೇತನ ನೀಡಬೇಕು. ತಪ್ಪಿದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.</p>.<p>‘ನೌಕರರ ಖಾತೆಗೆ ಬಾಕಿ ವೇತನ ಪಾವತಿ ಮಾಡದಿದ್ದರೆ ಮುಷ್ಕರ ಮಾಡಲಾಗುವುದು. ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಅನನುಕೂಲತೆಗಳಿಗೆ ಗುತ್ತಿಗೆದಾರರೇ ಹೊಣೆಗಾರರಾಗುತ್ತಾರೆ’ ಎಂದು ಸಂಘದ ಅಧ್ಯಕ್ಷ ಜಿ.ಕೆ.ಪಂಚಾಕ್ಷರಿ ಹೇಳಿದರು.</p>.<p>ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಎಲ್.ಹನುಮಾನಾಯ್ಕ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ‘ಕೂಡಲೇ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಸೂಚಿಸಿದರು.</p>.<p>ಗುತ್ತಿಗೆ ಆಧಾರಿತ ದಿನಗೂಲಿ ಸಿಬ್ಬಂದಿ ಎಂ.ಲಿಂಗರಾಜ್, ಎಂ.ದುರುಗೇಶ್, ಎನ್.ಮಂಜು, ಹೊಳೆಸಿರಿಗೆರೆ ಮಂಜು, ಎಂ.ಆರ್.ಚೇತನ್ ಕುಮಾರ್, ಕೋಟೇಶ್, ರಜನಿಕಾಂತ್, ಎಚ್.ಟಿ.ಕುಮಾರ್, ವೀರೇಂದ್ರ ಪಾಟೀಲ್, ಚಂದ್ರಶೇಖರ್, ಲಕ್ಷ್ಮಿಬಾಯಿ, ಹೀರಿಬಾಯಿ, ಶಾಂತಾಬಾಯಿ, ಹನುಮೀ ಬಾಯಿ, ವಿಜಯಲಕ್ಷ್ಮಿ, ಜ್ಯೋತಿ, ಮಂಗಳಾ, ಕರಿಬಸಮ್ಮ, ಶಿಲ್ಪಾ, ರತ್ನಮ್ಮ, ಧರ್ಮೀಬಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಗುತ್ತಿಗೆದಾರರಿಂದ ಮೂರು ತಿಂಗಳ ವೇತನ ಪಾವತಿ ಮಾಡದ್ದರಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ನೌಕರರ ಸಂಘದಿಂದ ಸೋಮವಾರ ಸಾಂಕೇತಿಕ ಧರಣಿ ನಡೆಸಲಾಯಿತು.</p>.<p>‘ಆ. 11ರಂದು ರಾಯಚೂರಿನ ದೀಕ್ಷಾ ಕನ್ಸಲ್ಟೆನ್ಸಿ ಸಂಸ್ಥೆಯು ಗುತ್ತಿಗೆ ಪಡೆದಿದೆ. ಆಗಸ್ಟ್ ತಿಂಗಳ 21 ದಿನದ ವೇತನ ಪಾವತಿಸಿದ್ದು ಬಿಟ್ಟರೆ, ಇದುವರೆಗೂ ಯಾವುದೇ ಸಿಬ್ಬಂದಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ’ ಎಂದು ಸಂಘದ ಗೌರವಾಧ್ಯಕ್ಷ ಎಚ್.ಕೆ.ಕೊಟ್ರಪ್ಪ ದೂರಿದರು.</p>.<p>‘ಸಿಬ್ಬಂದಿ ಪಿಎಫ್ ಮತ್ತು ಇಎಸ್ಐ ಸೌಲಭ್ಯದ ಕಂತುಗಳನ್ನು ಜಮಾ ಮಾಡಿರುವರೋ ಇಲ್ಲವೋ, ಎಷ್ಟು ಜಮಾ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯನ್ನು ಗುತ್ತಿಗೆದಾರರು ನೀಡುವುಲ್ಲ. ಕೂಡಲೇ ಅವರು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ವೇತನವಿಲ್ಲದೆ ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಗುತ್ತಿಗೆದಾರರು ವೇತನ ನೀಡಬೇಕು. ತಪ್ಪಿದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.</p>.<p>‘ನೌಕರರ ಖಾತೆಗೆ ಬಾಕಿ ವೇತನ ಪಾವತಿ ಮಾಡದಿದ್ದರೆ ಮುಷ್ಕರ ಮಾಡಲಾಗುವುದು. ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ಅನನುಕೂಲತೆಗಳಿಗೆ ಗುತ್ತಿಗೆದಾರರೇ ಹೊಣೆಗಾರರಾಗುತ್ತಾರೆ’ ಎಂದು ಸಂಘದ ಅಧ್ಯಕ್ಷ ಜಿ.ಕೆ.ಪಂಚಾಕ್ಷರಿ ಹೇಳಿದರು.</p>.<p>ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಎಲ್.ಹನುಮಾನಾಯ್ಕ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ‘ಕೂಡಲೇ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಸೂಚಿಸಿದರು.</p>.<p>ಗುತ್ತಿಗೆ ಆಧಾರಿತ ದಿನಗೂಲಿ ಸಿಬ್ಬಂದಿ ಎಂ.ಲಿಂಗರಾಜ್, ಎಂ.ದುರುಗೇಶ್, ಎನ್.ಮಂಜು, ಹೊಳೆಸಿರಿಗೆರೆ ಮಂಜು, ಎಂ.ಆರ್.ಚೇತನ್ ಕುಮಾರ್, ಕೋಟೇಶ್, ರಜನಿಕಾಂತ್, ಎಚ್.ಟಿ.ಕುಮಾರ್, ವೀರೇಂದ್ರ ಪಾಟೀಲ್, ಚಂದ್ರಶೇಖರ್, ಲಕ್ಷ್ಮಿಬಾಯಿ, ಹೀರಿಬಾಯಿ, ಶಾಂತಾಬಾಯಿ, ಹನುಮೀ ಬಾಯಿ, ವಿಜಯಲಕ್ಷ್ಮಿ, ಜ್ಯೋತಿ, ಮಂಗಳಾ, ಕರಿಬಸಮ್ಮ, ಶಿಲ್ಪಾ, ರತ್ನಮ್ಮ, ಧರ್ಮೀಬಾಯಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>