ಬೆಳೆ ಹಾನಿಯಿಂದಾಗಿ ತರಕಾರಿಗಳು ಮಾರುಕಟ್ಟೆಗೆ ಕಡಿಮೆ ಪೂರೈಕೆ ಆಗುತ್ತಿದೆ. ಇದರಿಂದ ಸಹಜವಾಗಿಯೇ ದರ ಏರಿಕೆ ಕಂಡಿದೆ. ಎರಡು ತಿಂಗಳ ಹಿಂದೆ ಟೊಮೆಟೊ ಕೆ.ಜಿ.ಗೆ ₹ 15ರಿಂದ ₹ 20ರ ವರೆಗೆ ಇತ್ತು. ಪ್ರಸ್ತುತ ₹ 50ರಿಂದ ₹ 60ರ ವರೆಗೆ ಮಾರಾಟವಾಗುತ್ತಿದೆ. ಅಧಿಕ ಬೆಲೆಯಿಂದ ಟೊಮೆಟೊ ಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು ಹುಣಸೆ ಹಣ್ಣು ಖರೀದಿಸಲು ಮುಂದಾಗುತ್ತಿದ್ದಾರೆ. ಕೆಲವರು ಮಾತ್ರ ವಿಧಿಯಿಲ್ಲದೆ ಇರುವಷ್ಟು ಬೆಲೆಯನ್ನು ಕೊಟ್ಟು ಖರೀದಿಸುತ್ತಿದ್ದಾರೆ. ಶುಂಠಿ ₹ 40, ಈರುಳ್ಳಿ ₹ 35, ಬೀನ್ಸ್ ₹ 60, ಕ್ಯಾರೆಟ್ ₹ 50, ಬದನೆಕಾಯಿ ₹ 30, ಬೆಂಡೆಕಾಯಿ ₹ 60ಕ್ಕೆ
ತಲುಪಿದೆ.