<p><strong>ಸಾಸ್ವೆಹಳ್ಳಿ: </strong>ಹೋಬಳಿಯ ಹನುಮನಹಳ್ಳಿ, ಸಾಸ್ವೆಹಳ್ಳಿ, ಐನೂರು, ಕಮ್ಮಾರಗಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ ಮಾಡಿ ವಿಜಯದಶಮಿ ಆಚರಿಸಲಾಯಿತು.</p>.<p>ಗ್ರಾಮಸ್ಥರು ಊರ ಹೊರವಲಯದಲ್ಲಿರುವ ಬನ್ನಿ ಮರದಲ್ಲಿ ಉತ್ಸವ ಮೂರ್ತಿಗಳೊಂದಿಗೆ ತೆರಳಿ ಬನ್ನಿ ಮುಡಿದರು.</p>.<p>ರಾಂಪುರದಲ್ಲಿ ದುರ್ಗಾದೇವಿ ಹಾಗೂ ವೆಂಕಟೇಶ್ವರ ಸ್ವಾಮಿಯ ಬನ್ನಿ ಮುಡಿಯುವ ಮುನ್ನ ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಗೆ ತೆರಳಿ ಗಂಗಾ ಪೊಜೆ ನೆರವೇರಿಸಲಾಯಿತು.</p>.<p>ಒಂಬತ್ತು ದಿನಗಳ ಕಾಲ ಗ್ರಾಮದ ಮಹಿಳೆಯರು, ನವ ದುರ್ಗೆಯರ ವೃತಾಚರಣೆ ಕೈಗೊಂಡು ಮಡಿಯೊಂದಿಗೆ ಅಮ್ಮನ ಗುಡಿಗೆ ಹಾಗೂ ಬನ್ನಿ ಮರಕ್ಕೆ ತೆರಳಿ ಪೂಜೆಯನ್ನು ನೆರವೇರಿಸಿದರು.</p>.<p>ಕಿರಿಯರು ಬನ್ನಿ ಪತ್ರೆಯನ್ನು ಹಿರಿಯರಿಗೆ ನೀಡಿ ಆಶೀರ್ವಾದ ಪಡೆದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ: </strong>ಹೋಬಳಿಯ ಹನುಮನಹಳ್ಳಿ, ಸಾಸ್ವೆಹಳ್ಳಿ, ಐನೂರು, ಕಮ್ಮಾರಗಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ ಮಾಡಿ ವಿಜಯದಶಮಿ ಆಚರಿಸಲಾಯಿತು.</p>.<p>ಗ್ರಾಮಸ್ಥರು ಊರ ಹೊರವಲಯದಲ್ಲಿರುವ ಬನ್ನಿ ಮರದಲ್ಲಿ ಉತ್ಸವ ಮೂರ್ತಿಗಳೊಂದಿಗೆ ತೆರಳಿ ಬನ್ನಿ ಮುಡಿದರು.</p>.<p>ರಾಂಪುರದಲ್ಲಿ ದುರ್ಗಾದೇವಿ ಹಾಗೂ ವೆಂಕಟೇಶ್ವರ ಸ್ವಾಮಿಯ ಬನ್ನಿ ಮುಡಿಯುವ ಮುನ್ನ ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಗೆ ತೆರಳಿ ಗಂಗಾ ಪೊಜೆ ನೆರವೇರಿಸಲಾಯಿತು.</p>.<p>ಒಂಬತ್ತು ದಿನಗಳ ಕಾಲ ಗ್ರಾಮದ ಮಹಿಳೆಯರು, ನವ ದುರ್ಗೆಯರ ವೃತಾಚರಣೆ ಕೈಗೊಂಡು ಮಡಿಯೊಂದಿಗೆ ಅಮ್ಮನ ಗುಡಿಗೆ ಹಾಗೂ ಬನ್ನಿ ಮರಕ್ಕೆ ತೆರಳಿ ಪೂಜೆಯನ್ನು ನೆರವೇರಿಸಿದರು.</p>.<p>ಕಿರಿಯರು ಬನ್ನಿ ಪತ್ರೆಯನ್ನು ಹಿರಿಯರಿಗೆ ನೀಡಿ ಆಶೀರ್ವಾದ ಪಡೆದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>