‘ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 25 ದಿನಗಳ ಕಡಲೆ ಬೆಳೆ ಇದ್ದು, ಹಲವು ದಿನಗಳಿಂದ ಮೋಡ ಮುಸುಕಿದ ವಾತಾವರಣದಿಂದಾಗಿ ಕಾಯಿಕೊರಕ (ಹೆಲಿಕೊವೆರ್ಪಾ) ಕೀಟಬಾಧೆ ಶುರುವಾಗಿದೆ. ಆರಂಭದಲ್ಲಿ ಗಿಡದ ಎಲೆಗಳನ್ನು ತಿನ್ನುವ ಕೀಟ ನಂತರದಲ್ಲಿ ಮೊಗ್ಗು ಮತ್ತು ಕಾಯಿಯನ್ನು ಕೊರೆದು ತಿನ್ನಲು ಆರಂಭಿಸುತ್ತವೆ. ಸಕಾಲದಲ್ಲಿ ಔಷಧ ಸಿಂಪರಣೆ ಮಾಡದೇ ಇದ್ದಲ್ಲಿ ಶೇ 50ರಷ್ಟು ಬೆಳೆಯನ್ನು ಹುಳುಗಳು ತಿಂದು ಹಾಕುತ್ತವೆ. ಇದರಿಂದ ರೈತರಿಗೆ ತೀವ್ರ ನಷ್ಟ ಉಂಟಾಗಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸುಲು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.