<p><strong>ದಾವಣಗೆರೆ</strong>: ‘ಹೆಣ್ಣು ಏನೇ ಸಾಧನೆ ಮಾಡಿದರೂ ಅದನ್ನು ಒಪ್ಪಿಕೊಳ್ಳುವ, ಮೆಚ್ಚುಗೆ ಸೂಚಿಸುವ ಗುಣ ಕಡಿಮೆಯಾಗುತ್ತಿದೆ. ಹಾಗಾದರೆ ಪುರುಷರು ಏನು ಸಾಧಿಸಿದ್ದಾರೆ ಎಂದು ಮಹಿಳೆಯರು ಕೇಳಬಹುದಲ್ಲವೇ’ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಪ್ರಶ್ನಿಸಿದರು. </p>.<p>ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣದಿಂದ ನಡೆದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. </p>.<p>‘ಹೆಣ್ಣಿನ ಪ್ರತಿಭೆ ತುಳಿಯುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಪುರುಷ ಪ್ರಾಧಾನ್ಯ ಕಡಿಮೆಯಾಗಿ ಆಕೆಯನ್ನೂ ಸಮಾನವಾಗಿ ನೋಡುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು’ ಎಂದು ಹೇಳಿದರು. </p>.<p>‘ಪ್ರತಿ ಗಂಧರ್ವ’ ಎಂದು ಹೇಳುವಾಗ ಹೆಣ್ಣಿನ ಸ್ವಂತಿಕೆಯನ್ನು ಕಳೆದಂತೆ ಆಗುತ್ತದೆ. ಇದು ನೋವಿನ ಸಂಗತಿ. ಗೋಹರ್ಬಾಯಿ ಕರ್ನಾಟಕಿ ಅವರು ಹಾಡಿದ ಮೂಲ ಹಾಡುಗಳ ಧ್ವನಿಮುದ್ರಣವನ್ನು ಈ ನಾಟಕದಲ್ಲಿ ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟರು. </p>.<p>‘ಅಮೀರ್ಬಾಯಿ ಕರ್ನಾಟಕಿ ಅವರ ಬಗ್ಗೆ ಓದಿದಾಗ ಅವರು ನನಗೆ ಹತ್ತಿರದವರು ಎನಿಸಿತು. ಅವರನ್ನು ಕುರಿತು ನಾಟಕ ಬರೆಸಬೇಕು ಎಂಬ ಆಸೆ ಇತ್ತು, ಆ ದಿನ ಕೂಡಿ ಬರಲಿಲ್ಲ. ಲೇಖಕ ರಹಮತ್ ತರೀಕೆರೆ ಅವರದು ವಿಶಿಷ್ಟ ಬರವಣಿಗೆ’ ಎಂದು ಹೇಳಿದರು. </p>.<p>‘ಅಮೀರ್ಬಾಯಿ ಹಾಗೂ ಗೋಹರ್ಬಾಯಿ ಸಹೋದರಿಯರು ರಂಗಭೂಮಿ ಪ್ರವೇಶಿಸಿ ಒಂದು ಶತಮಾನ ತುಂಬಿದೆ. ಆ ಸಹೋದರಿಯರು ಧರ್ಮ, ಕಲೆ ಹಾಗೂ ಪ್ರೇಮದ ಸೀಮೋಲ್ಲಂಘನೆ ಮಾಡಿದರು’ ಎಂದು ಲೇಖಕ ಪ್ರೊ. ರಹಮತ್ ತರೀಕೆರೆ ಹೇಳಿದರು. </p>.<p>‘ದಾವಣಗೆರೆ ಒಂದು ಕಾಲದಲ್ಲಿ ನೂರಾರು ನಾಟಕ ಕಂಪನಿಗಳಿಗೆ ಆಶ್ರಯ ನೀಡಿದ ನೆಲ. ಇಲ್ಲಿನ ಮಂಡಕ್ಕಿ- ಮಿರ್ಚಿಯ ಘಮಲು ಈ ನಾಟಕದಲ್ಲಿದೆ. ರಹಮತ್ ತರೀಕೆರೆ ಅವರು ಸಂಶೋಧನೆ ಮಾಡಿದ್ದರಿಂದಾಗಿ ಈ ನಾಟಕ ರಚಿಸುವುದು ಸಾಧ್ಯವಾಯಿತು’ ಎಂದು ನಾಟಕಕಾರ ರಾಜಪ್ಪ ದಳವಾಯಿ ಹೇಳಿದರು. </p>.<p>ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ರಂಗ ನಿರ್ದೇಶಕ ಮಾಲತೇಶ ಬಡಿಗೇರ ಇದ್ದರು. ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಎಸ್.ಎಸ್. ಸಿದ್ಧರಾಜು ನಿರೂಪಿಸಿದರು. </p>.<p><strong>ಅಮೀರ್ಬಾಯಿ ಅವರ ಕುರಿತು ಬರೆದ ಪುಸ್ತಕ ರಂಗರೂಪ ಪಡೆದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳುತ್ತಿರುವುದು ಸಂತೋಷ ತಂದಿದೆ. ಕೃತಿಯ ರಚನೆಗಾಗಿ ಮಹಾರಾಷ್ಟ್ರ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದೆ </strong></p><p><strong>-ಪ್ರೊ. ರಹಮತ್ ತರೀಕೆರೆ ಲೇಖಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ಹೆಣ್ಣು ಏನೇ ಸಾಧನೆ ಮಾಡಿದರೂ ಅದನ್ನು ಒಪ್ಪಿಕೊಳ್ಳುವ, ಮೆಚ್ಚುಗೆ ಸೂಚಿಸುವ ಗುಣ ಕಡಿಮೆಯಾಗುತ್ತಿದೆ. ಹಾಗಾದರೆ ಪುರುಷರು ಏನು ಸಾಧಿಸಿದ್ದಾರೆ ಎಂದು ಮಹಿಳೆಯರು ಕೇಳಬಹುದಲ್ಲವೇ’ ಎಂದು ಹಿರಿಯ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಪ್ರಶ್ನಿಸಿದರು. </p>.<p>ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣದಿಂದ ನಡೆದ ‘ಪ್ರತಿಗಂಧರ್ವ’ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. </p>.<p>‘ಹೆಣ್ಣಿನ ಪ್ರತಿಭೆ ತುಳಿಯುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಪುರುಷ ಪ್ರಾಧಾನ್ಯ ಕಡಿಮೆಯಾಗಿ ಆಕೆಯನ್ನೂ ಸಮಾನವಾಗಿ ನೋಡುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು’ ಎಂದು ಹೇಳಿದರು. </p>.<p>‘ಪ್ರತಿ ಗಂಧರ್ವ’ ಎಂದು ಹೇಳುವಾಗ ಹೆಣ್ಣಿನ ಸ್ವಂತಿಕೆಯನ್ನು ಕಳೆದಂತೆ ಆಗುತ್ತದೆ. ಇದು ನೋವಿನ ಸಂಗತಿ. ಗೋಹರ್ಬಾಯಿ ಕರ್ನಾಟಕಿ ಅವರು ಹಾಡಿದ ಮೂಲ ಹಾಡುಗಳ ಧ್ವನಿಮುದ್ರಣವನ್ನು ಈ ನಾಟಕದಲ್ಲಿ ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಪಟ್ಟರು. </p>.<p>‘ಅಮೀರ್ಬಾಯಿ ಕರ್ನಾಟಕಿ ಅವರ ಬಗ್ಗೆ ಓದಿದಾಗ ಅವರು ನನಗೆ ಹತ್ತಿರದವರು ಎನಿಸಿತು. ಅವರನ್ನು ಕುರಿತು ನಾಟಕ ಬರೆಸಬೇಕು ಎಂಬ ಆಸೆ ಇತ್ತು, ಆ ದಿನ ಕೂಡಿ ಬರಲಿಲ್ಲ. ಲೇಖಕ ರಹಮತ್ ತರೀಕೆರೆ ಅವರದು ವಿಶಿಷ್ಟ ಬರವಣಿಗೆ’ ಎಂದು ಹೇಳಿದರು. </p>.<p>‘ಅಮೀರ್ಬಾಯಿ ಹಾಗೂ ಗೋಹರ್ಬಾಯಿ ಸಹೋದರಿಯರು ರಂಗಭೂಮಿ ಪ್ರವೇಶಿಸಿ ಒಂದು ಶತಮಾನ ತುಂಬಿದೆ. ಆ ಸಹೋದರಿಯರು ಧರ್ಮ, ಕಲೆ ಹಾಗೂ ಪ್ರೇಮದ ಸೀಮೋಲ್ಲಂಘನೆ ಮಾಡಿದರು’ ಎಂದು ಲೇಖಕ ಪ್ರೊ. ರಹಮತ್ ತರೀಕೆರೆ ಹೇಳಿದರು. </p>.<p>‘ದಾವಣಗೆರೆ ಒಂದು ಕಾಲದಲ್ಲಿ ನೂರಾರು ನಾಟಕ ಕಂಪನಿಗಳಿಗೆ ಆಶ್ರಯ ನೀಡಿದ ನೆಲ. ಇಲ್ಲಿನ ಮಂಡಕ್ಕಿ- ಮಿರ್ಚಿಯ ಘಮಲು ಈ ನಾಟಕದಲ್ಲಿದೆ. ರಹಮತ್ ತರೀಕೆರೆ ಅವರು ಸಂಶೋಧನೆ ಮಾಡಿದ್ದರಿಂದಾಗಿ ಈ ನಾಟಕ ರಚಿಸುವುದು ಸಾಧ್ಯವಾಯಿತು’ ಎಂದು ನಾಟಕಕಾರ ರಾಜಪ್ಪ ದಳವಾಯಿ ಹೇಳಿದರು. </p>.<p>ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪ್ರಾಸ್ತಾವಿಕ ಮಾತನಾಡಿದರು. ರಂಗ ನಿರ್ದೇಶಕ ಮಾಲತೇಶ ಬಡಿಗೇರ ಇದ್ದರು. ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ಎಸ್.ಎಸ್. ಸಿದ್ಧರಾಜು ನಿರೂಪಿಸಿದರು. </p>.<p><strong>ಅಮೀರ್ಬಾಯಿ ಅವರ ಕುರಿತು ಬರೆದ ಪುಸ್ತಕ ರಂಗರೂಪ ಪಡೆದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಮುಂದೆ ಪ್ರದರ್ಶನಗೊಳ್ಳುತ್ತಿರುವುದು ಸಂತೋಷ ತಂದಿದೆ. ಕೃತಿಯ ರಚನೆಗಾಗಿ ಮಹಾರಾಷ್ಟ್ರ ಭಾಗದಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದೆ </strong></p><p><strong>-ಪ್ರೊ. ರಹಮತ್ ತರೀಕೆರೆ ಲೇಖಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>