<p><strong>ಮಲೇಬೆನ್ನೂರು:</strong> ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.<br /> <br /> ಉತ್ಸವಕ್ಕೂ ಮುನ್ನ ಕರಿಬಸವೇಶ್ವರ ಸ್ವಾಮಿ ರಾಜಬೀದಿ ಉತ್ಸವ ನಡೆಯಿತು. ಪುಣ್ಯಾಹವಾಚನ, ರಥಪೂಜೆ, ಶಾಂತಿಮಂತ್ರ ಪಠಣ, ಅಷ್ಟದಿಕ್ಪಾಲಕರಿಗೆ ಬಲಿದಾನದ ನಂತರ ರಥಾರೋಹಣವಾಯಿತು.<br /> <br /> ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೆಶ್ವರ ದೇಶೀಕೇಂದ್ರ ಸ್ವಾಮೀಜಿ ರಥಪೂಜೆ ನೆರವೇರಿಸಿದರು. ಭಕ್ತರು ರಥಕ್ಕೆ ಉತ್ತುತ್ತೆ, ಬಾಳೆಹಣ್ಣು, ಧಾನ್ಯ, ಗಾಲಿಗೆ ತೆಂಗಿನಕಾಯಿ ಸಮರ್ಪಣೆ ಮಾಡಿದರು.<br /> <br /> ನಂದಿಕೋಲು, ತಮಟೆ, ಜಾಂಚ್, ಡೊಳ್ಳು, ಭಜನಾತಂಡ, ಪುರವಂತರ ವೀರಭದ್ರ ದೇವರ ಕುಣಿತ, ಬೊಂಬೆ, ಕೀಲು ಕುದುರೆ ಕುಣಿತ ಮಂಗಳವಾದ್ಯ ಜೋಡು ನಂದಾದೀಪ ಉತ್ಸವಕ್ಕೆ ಕಳೆ ತಂದಿದ್ದವು.<br /> <br /> ದೇವಾಲಯ, ರಾಜಬೀದಿಗೆ ವಿದ್ಯುದ್ದೀಪ ಗಳಿಂದ ಹಾಗೂ ರಥವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಗದ್ದುಗೆಗೆ ರುದ್ರಾಭೀಷೇಕ ಹಾಗೂ ವಿಶೇಷ ಪೂಜೆ ಮಾಡಲಾಯಿತು.<br /> <br /> 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಭಕ್ತರು ಬಗೆಬಗೆಯ ಹರಕೆ ತೀರಿಸಿದರು. ಕರಿಬಸವೇಶ್ವರ ಟ್ರಸ್ಟ್ ಅನ್ನ ಸಂತರ್ಪಣೆ ಹಾಗೂ ವಸತಿ ವ್ಯವಸ್ಥೆ ಮಾಡಿತ್ತು. ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.<br /> <br /> <strong>ವಿಚಿತ್ರ ಪದ್ಧತಿಗಳ ಅನಾವರಣ</strong><br /> ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಭಕ್ತರು ವಿಶೇಷ ಪೂಜಾ ವಿಧಿ ನೆರವೇರಿಸಿದರು.<br /> <br /> ನದಿಯಲ್ಲಿ ಮಿಂದವರ ಮೇಲೆ ಅವಾಹಿತವಾದ ಕ್ಷುದ್ರ ಶಕ್ತಿಗಳನ್ನು ಅಜ್ಜಯ್ಯ ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ತಲೆ ಮೇಲೆ ಕಲ್ಲು ಹೊತ್ತವರು, ಸೊಂಟಕ್ಕೆ ಬೀಗ ಹಾಕಿಕೊಂಡು ಮುಕ್ತಿ ನೀಡುವಂತೆ ಪ್ರಾರ್ಥಿಸುವುದು ಕಂಡುಬಂದಿತು.<br /> <br /> ಇನ್ನೂ ಕೆಲ ಭಕ್ತರು ದೇವಾಲಯದ ಪ್ರಾಕಾರದಲ್ಲಿ ಉರುಳು ಸೇವೆ ಮಾಡಿದರು. ಹಲವಾರು ಬಗೆ ಹರಕೆ ಸಮರ್ಪಿಸಿ ಜನತೆ ಭಕ್ತಿ ಮೆರೆದರು.<br /> <br /> <strong>ಹೋಳಿಗೆಯೂಟ: </strong>ನದಿ ದಂಡೆಯಲ್ಲಿ ಭಕ್ತರು ಮರಳಲ್ಲಿ ಶಿವಲಿಂಗ ಮಾಡಿ ಪೂಜೆ ಸಲ್ಲಿಸಿ, ಹೋಳಿಗೆ, ಕಡಬು ಸೇರಿದಂತೆ ಹಲವು ಭಕ್ಷ್ಯ ನೈವೇದ್ಯ ಮಾಡಿ ಕುಟುಂಬ ಸಮೇತ ಹೋಳಿಗೆಯೂಟ ಸವಿದರು.<br /> <br /> <strong>ಹೇಳಿಕೆ–ಕೇಳಿಕೆ: </strong>ವಿಶೇಷ ಪೂಜೆ ಮಾಡಿದ ಕೆಲವರು ಕೈಯಲ್ಲಿ ನಿಂಬೆಹಣ್ಣು ಹಿಡಿದ ದೇವತೆ ಆವಾಹನೆ ಆದ ವ್ಯಕ್ತಿಗೆ, ತಮ್ಮ ಬಯಕೆ ಈಡೇರುತ್ತವೆಯೇ? ಸಮಸ್ಯೆ ಎಂದು ಪರಿಹಾರವಾಗುತ್ತದೆ ?ಮಕ್ಕಳ ಭಾಗ್ಯ ಎಂದು? ಎಂಬ ಹೇಳಿಕೆ–ಕೇಳಿಕೆ ನಡೆದವು.<br /> ತೆಪ್ಪ ವಿಹಾರದ ಆಕರ್ಷಣೆ<br /> <br /> ಜಾತ್ರೆ ವೇಳೆ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಜನರು ಭಾನುವಾರ ಓಡಾಡಲು ತೆಪ್ಪಗಳನ್ನು ಬಳಸಿದರು.<br /> 16 ತೆಪ್ಪಗಳು ಜನರನ್ನು ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಹಾಗೂ ನಡುಗಡ್ಡೆಗಳಿಗೆ ಕರೆದೊಯ್ದವು. ರಜಾ ದಿನವಾದ ಕಾರಣ ಅನೇಕರು ಮಕ್ಕಳ ಸಮೇತ ಆಗಮಿಸಿದ್ದರು. ತೆಪ್ಪಗಳ ಮಾಲೀಕರು ತಲಾ ₨ 5 ದರ ಪಡೆದರು.<br /> <br /> ಯುವ ಜನತೆ, ಮಹಿಳೆಯರು, ಮಕ್ಕಳು ನದಿಯಲ್ಲಿ ಈಜಾಡಿ ರಜೆ ಖುಷಿ ಅನುಭವಿಸಿದರು. ರಥೋತ್ಸವದ ವೇಳೆ ದೇವರಿಗೆ ಸಮರ್ಪಿಸಿದ ಧಾನ್ಯ ಆರಿಸಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು.<br /> <br /> ಜೋಳ, ಮುಸುಕಿನ ಜೋಳ, ನವಣೆ, ಸಜ್ಜೆ, ರಾಗಿ, ಹತ್ತಿ, ಕುಸುಬೆ, ಎಳ್ಳು, ಹರಳಕಾಳು, ಭತ್ತದಕಾಳನ್ನು ಆರಿಸಿಕೊಳ್ಳುವ ದೃಶ್ಯ ಕಂಡುಬಂದಿತು.<br /> <br /> ದೇವರಿಗೆ ಅರ್ಪಿಸಿದ ಧಾನ್ಯವನ್ನು ಬಿತ್ತನೆ ಮಾಡುವಾಗ ಬಳಸಿದರೆ ರೋಗಭಾಧೆ ಕಡಿಮೆಯಾಗಿ ಉತ್ತಮ ಇಳುವರಿ ಬರುತ್ತದೆ ಎಂದು ಆರಿಸಿಕೊಳ್ಳುತ್ತಿದ್ದವರು ಮಾಹಿತಿ ನೀಡಿದರು.<br /> <br /> <strong>ಕಳವು ಘಟನೆ: </strong>ಮೊಬೈಲ್, ಸರ ಕಳವು ಕಿಸೆಗಳ್ಳತನದ ಕೆಲವು ಪ್ರಕರಣಗಳು ವರದಿಯಾದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು:</strong> ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ರಥೋತ್ಸವ ಭಾನುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.<br /> <br /> ಉತ್ಸವಕ್ಕೂ ಮುನ್ನ ಕರಿಬಸವೇಶ್ವರ ಸ್ವಾಮಿ ರಾಜಬೀದಿ ಉತ್ಸವ ನಡೆಯಿತು. ಪುಣ್ಯಾಹವಾಚನ, ರಥಪೂಜೆ, ಶಾಂತಿಮಂತ್ರ ಪಠಣ, ಅಷ್ಟದಿಕ್ಪಾಲಕರಿಗೆ ಬಲಿದಾನದ ನಂತರ ರಥಾರೋಹಣವಾಯಿತು.<br /> <br /> ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೆಶ್ವರ ದೇಶೀಕೇಂದ್ರ ಸ್ವಾಮೀಜಿ ರಥಪೂಜೆ ನೆರವೇರಿಸಿದರು. ಭಕ್ತರು ರಥಕ್ಕೆ ಉತ್ತುತ್ತೆ, ಬಾಳೆಹಣ್ಣು, ಧಾನ್ಯ, ಗಾಲಿಗೆ ತೆಂಗಿನಕಾಯಿ ಸಮರ್ಪಣೆ ಮಾಡಿದರು.<br /> <br /> ನಂದಿಕೋಲು, ತಮಟೆ, ಜಾಂಚ್, ಡೊಳ್ಳು, ಭಜನಾತಂಡ, ಪುರವಂತರ ವೀರಭದ್ರ ದೇವರ ಕುಣಿತ, ಬೊಂಬೆ, ಕೀಲು ಕುದುರೆ ಕುಣಿತ ಮಂಗಳವಾದ್ಯ ಜೋಡು ನಂದಾದೀಪ ಉತ್ಸವಕ್ಕೆ ಕಳೆ ತಂದಿದ್ದವು.<br /> <br /> ದೇವಾಲಯ, ರಾಜಬೀದಿಗೆ ವಿದ್ಯುದ್ದೀಪ ಗಳಿಂದ ಹಾಗೂ ರಥವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಗದ್ದುಗೆಗೆ ರುದ್ರಾಭೀಷೇಕ ಹಾಗೂ ವಿಶೇಷ ಪೂಜೆ ಮಾಡಲಾಯಿತು.<br /> <br /> 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಭಕ್ತರು ಬಗೆಬಗೆಯ ಹರಕೆ ತೀರಿಸಿದರು. ಕರಿಬಸವೇಶ್ವರ ಟ್ರಸ್ಟ್ ಅನ್ನ ಸಂತರ್ಪಣೆ ಹಾಗೂ ವಸತಿ ವ್ಯವಸ್ಥೆ ಮಾಡಿತ್ತು. ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.<br /> <br /> <strong>ವಿಚಿತ್ರ ಪದ್ಧತಿಗಳ ಅನಾವರಣ</strong><br /> ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಭಕ್ತರು ವಿಶೇಷ ಪೂಜಾ ವಿಧಿ ನೆರವೇರಿಸಿದರು.<br /> <br /> ನದಿಯಲ್ಲಿ ಮಿಂದವರ ಮೇಲೆ ಅವಾಹಿತವಾದ ಕ್ಷುದ್ರ ಶಕ್ತಿಗಳನ್ನು ಅಜ್ಜಯ್ಯ ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ತಲೆ ಮೇಲೆ ಕಲ್ಲು ಹೊತ್ತವರು, ಸೊಂಟಕ್ಕೆ ಬೀಗ ಹಾಕಿಕೊಂಡು ಮುಕ್ತಿ ನೀಡುವಂತೆ ಪ್ರಾರ್ಥಿಸುವುದು ಕಂಡುಬಂದಿತು.<br /> <br /> ಇನ್ನೂ ಕೆಲ ಭಕ್ತರು ದೇವಾಲಯದ ಪ್ರಾಕಾರದಲ್ಲಿ ಉರುಳು ಸೇವೆ ಮಾಡಿದರು. ಹಲವಾರು ಬಗೆ ಹರಕೆ ಸಮರ್ಪಿಸಿ ಜನತೆ ಭಕ್ತಿ ಮೆರೆದರು.<br /> <br /> <strong>ಹೋಳಿಗೆಯೂಟ: </strong>ನದಿ ದಂಡೆಯಲ್ಲಿ ಭಕ್ತರು ಮರಳಲ್ಲಿ ಶಿವಲಿಂಗ ಮಾಡಿ ಪೂಜೆ ಸಲ್ಲಿಸಿ, ಹೋಳಿಗೆ, ಕಡಬು ಸೇರಿದಂತೆ ಹಲವು ಭಕ್ಷ್ಯ ನೈವೇದ್ಯ ಮಾಡಿ ಕುಟುಂಬ ಸಮೇತ ಹೋಳಿಗೆಯೂಟ ಸವಿದರು.<br /> <br /> <strong>ಹೇಳಿಕೆ–ಕೇಳಿಕೆ: </strong>ವಿಶೇಷ ಪೂಜೆ ಮಾಡಿದ ಕೆಲವರು ಕೈಯಲ್ಲಿ ನಿಂಬೆಹಣ್ಣು ಹಿಡಿದ ದೇವತೆ ಆವಾಹನೆ ಆದ ವ್ಯಕ್ತಿಗೆ, ತಮ್ಮ ಬಯಕೆ ಈಡೇರುತ್ತವೆಯೇ? ಸಮಸ್ಯೆ ಎಂದು ಪರಿಹಾರವಾಗುತ್ತದೆ ?ಮಕ್ಕಳ ಭಾಗ್ಯ ಎಂದು? ಎಂಬ ಹೇಳಿಕೆ–ಕೇಳಿಕೆ ನಡೆದವು.<br /> ತೆಪ್ಪ ವಿಹಾರದ ಆಕರ್ಷಣೆ<br /> <br /> ಜಾತ್ರೆ ವೇಳೆ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ಜನರು ಭಾನುವಾರ ಓಡಾಡಲು ತೆಪ್ಪಗಳನ್ನು ಬಳಸಿದರು.<br /> 16 ತೆಪ್ಪಗಳು ಜನರನ್ನು ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಹಾಗೂ ನಡುಗಡ್ಡೆಗಳಿಗೆ ಕರೆದೊಯ್ದವು. ರಜಾ ದಿನವಾದ ಕಾರಣ ಅನೇಕರು ಮಕ್ಕಳ ಸಮೇತ ಆಗಮಿಸಿದ್ದರು. ತೆಪ್ಪಗಳ ಮಾಲೀಕರು ತಲಾ ₨ 5 ದರ ಪಡೆದರು.<br /> <br /> ಯುವ ಜನತೆ, ಮಹಿಳೆಯರು, ಮಕ್ಕಳು ನದಿಯಲ್ಲಿ ಈಜಾಡಿ ರಜೆ ಖುಷಿ ಅನುಭವಿಸಿದರು. ರಥೋತ್ಸವದ ವೇಳೆ ದೇವರಿಗೆ ಸಮರ್ಪಿಸಿದ ಧಾನ್ಯ ಆರಿಸಿಕೊಂಡು ಹೋಗಲು ಜನರು ಮುಗಿಬಿದ್ದಿದ್ದರು.<br /> <br /> ಜೋಳ, ಮುಸುಕಿನ ಜೋಳ, ನವಣೆ, ಸಜ್ಜೆ, ರಾಗಿ, ಹತ್ತಿ, ಕುಸುಬೆ, ಎಳ್ಳು, ಹರಳಕಾಳು, ಭತ್ತದಕಾಳನ್ನು ಆರಿಸಿಕೊಳ್ಳುವ ದೃಶ್ಯ ಕಂಡುಬಂದಿತು.<br /> <br /> ದೇವರಿಗೆ ಅರ್ಪಿಸಿದ ಧಾನ್ಯವನ್ನು ಬಿತ್ತನೆ ಮಾಡುವಾಗ ಬಳಸಿದರೆ ರೋಗಭಾಧೆ ಕಡಿಮೆಯಾಗಿ ಉತ್ತಮ ಇಳುವರಿ ಬರುತ್ತದೆ ಎಂದು ಆರಿಸಿಕೊಳ್ಳುತ್ತಿದ್ದವರು ಮಾಹಿತಿ ನೀಡಿದರು.<br /> <br /> <strong>ಕಳವು ಘಟನೆ: </strong>ಮೊಬೈಲ್, ಸರ ಕಳವು ಕಿಸೆಗಳ್ಳತನದ ಕೆಲವು ಪ್ರಕರಣಗಳು ವರದಿಯಾದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>