<p><strong>ಹರಿಹರ</strong>: ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ಆರತಿ ಮಂಟಪದ ಬಳಿ ನದಿ ದಡದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಭಾನುವಾರ ಬೆಳಿಗ್ಗೆ ಕಾರ್ತಿಕ ಯೋಗ ದೀಪೋತ್ಸವ ಕಾರ್ಯಕ್ರಮ ಜರುಗಿತು.</p><p> ಬೆಳಿಗ್ಗೆ 4ಕ್ಕೆ ನೂರಾರು ದೀಪಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಡುವ ಮೂಲಕ ಆರಂಭಗೊAಡ ದೀಪೋತ್ಸವದಲ್ಲಿ ಅಗ್ನಿಹೋತ್ರ ಮುಂತಾದ ಕಾರ್ಯಕ್ರಮಗಳು ನಡೆದವು. </p><p> ಕಾರ್ಯಕ್ರಮದಲ್ಲಿ ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಸಂಸ್ಥೆಯ ಶಾಖೆಗಳಿಂದ ಆಗಮಿಸಿದ್ದ 95 ಪುರುಷರು ಮತ್ತು 120 ಮಹಿಳೆಯರು ಯೋಗಾಭ್ಯಾಸ ಮಾಡಿದರು, ನಂತರ ನಡೆದ ಚಿಂತನ-ಮAಥನ ಕಾರ್ಯಕ್ರಮದಲ್ಲಿ ಅತಿಥಿಗಳು ಯೋಗದ ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ ಮಹತ್ವವನ್ನು ವಿವರಿಸಿ, ಸಾರ್ವಜನಿಕರು ದಿನನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.<br> ಸಂಸ್ಥೆಯ ಪ್ರಾಂತ ಸಂಚಾಲಕ ಕೋಟ್ಯಾನ್ ಹರೀಶಣ್ಣ, ವಲಯ ಸಂಚಾಲಕ ಸತೀಶಣ್ಣ, ವಲಯ ಮಹಿಳಾ ಸಂಚಾಲಕಿ ಮಂಜುಳಕ್ಕ, ಉಪಾಧ್ಯಕ್ಷ ಕಲ್ಲೇಶಣ್ಣ, ಮುಖ್ಯ ಶಿಕ್ಷಕ ವೀರಭದ್ರಣ್ಣ ಸೇರಿದಂತೆ ವಲಯದ ಯೋಗ ಶಿಕ್ಷಕರು, ಅಭ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.<br> ........................</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಭಾಗದಲ್ಲಿರುವ ತುಂಗಭದ್ರಾ ಆರತಿ ಮಂಟಪದ ಬಳಿ ನದಿ ದಡದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಭಾನುವಾರ ಬೆಳಿಗ್ಗೆ ಕಾರ್ತಿಕ ಯೋಗ ದೀಪೋತ್ಸವ ಕಾರ್ಯಕ್ರಮ ಜರುಗಿತು.</p><p> ಬೆಳಿಗ್ಗೆ 4ಕ್ಕೆ ನೂರಾರು ದೀಪಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಡುವ ಮೂಲಕ ಆರಂಭಗೊAಡ ದೀಪೋತ್ಸವದಲ್ಲಿ ಅಗ್ನಿಹೋತ್ರ ಮುಂತಾದ ಕಾರ್ಯಕ್ರಮಗಳು ನಡೆದವು. </p><p> ಕಾರ್ಯಕ್ರಮದಲ್ಲಿ ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಸಂಸ್ಥೆಯ ಶಾಖೆಗಳಿಂದ ಆಗಮಿಸಿದ್ದ 95 ಪುರುಷರು ಮತ್ತು 120 ಮಹಿಳೆಯರು ಯೋಗಾಭ್ಯಾಸ ಮಾಡಿದರು, ನಂತರ ನಡೆದ ಚಿಂತನ-ಮAಥನ ಕಾರ್ಯಕ್ರಮದಲ್ಲಿ ಅತಿಥಿಗಳು ಯೋಗದ ಆಧ್ಯಾತ್ಮಿಕ, ಮಾನಸಿಕ ಹಾಗೂ ದೈಹಿಕ ಮಹತ್ವವನ್ನು ವಿವರಿಸಿ, ಸಾರ್ವಜನಿಕರು ದಿನನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.<br> ಸಂಸ್ಥೆಯ ಪ್ರಾಂತ ಸಂಚಾಲಕ ಕೋಟ್ಯಾನ್ ಹರೀಶಣ್ಣ, ವಲಯ ಸಂಚಾಲಕ ಸತೀಶಣ್ಣ, ವಲಯ ಮಹಿಳಾ ಸಂಚಾಲಕಿ ಮಂಜುಳಕ್ಕ, ಉಪಾಧ್ಯಕ್ಷ ಕಲ್ಲೇಶಣ್ಣ, ಮುಖ್ಯ ಶಿಕ್ಷಕ ವೀರಭದ್ರಣ್ಣ ಸೇರಿದಂತೆ ವಲಯದ ಯೋಗ ಶಿಕ್ಷಕರು, ಅಭ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.<br> ........................</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>