ಸೋಮವಾರ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಇದ್ದು, ಬೆಳಿಗ್ಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಂತರ ದಾಸೋಹ ನೆರವೇರುವುದು ಎಂದು ಮಠದ ಮೂಲಗಳು ತಿಳಿಸಿವೆ. ಈ ಧಾರ್ಮಿಕ ಕಾರ್ಯಗಳಿಗೆ ಶಾಸಕ ಎಂ.ಆರ್.ಪಾಟೀಲ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಕುಂದಗೋಳದ ಶಿವಾನಂದಮಠದ ಮಹಾಂತ ಶ್ರೀಗಳು, ಕುಂದಗೋಳದ ಕಲ್ಯಾಣಪುರದ ಬಸವಣ್ಣಜ್ಜನವರು, ಜಮಖಂಡಿಯ ಜಗದೀಶ್ವರ ಮಠದ ಶಿವಶರಣೆ ಪ್ರಮೀಳಾ ತಾಯಿ, ಅನೇಕ ಮಠಾಧೀಶರು, ಗ್ರಾಮದ ಸರ್ವ-ಧರ್ಮದ ಹಿರಿಯರು ಪಾಲ್ಗೊಳ್ಳುವರು.