‘ಬಿಆರ್ಟಿಎಸ್ ಮಾರ್ಗದಲ್ಲಿದ್ದ ಬೈರಿದೇವರಕೊಪ್ಪದ ದರ್ಗಾ ತೆರವಿನ ಹಿಂದೆ ಕೋಮು ರಾಜಕೀಯದ ಯಾವುದೇ ಉದ್ದೇಶವಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ಯೋಜನೆಯ ನೀಲನಕ್ಷೆ ತಯಾರಾಗಿದ್ದು, ಕಾಮಗಾರಿ ನಡೆದಿದ್ದು, ತೆರವು ಮಾಡಬೇಕಾದ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಅವರಿಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ, ದರ್ಗಾ ಉಳಿಸಲು ಅಥವಾ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಬೆಲ್ಲದ ಹೇಳಿದರು.