<p>ಹುಬ್ಬಳ್ಳಿ: ‘ಭ್ರಷ್ಟಾಚಾರ ನಿರ್ಮೂಲನೆ ಆಮ್ ಆದ್ಮಿ ಪಕ್ಷದ ಮೂಲ ಸಿದ್ಧಾಂತ. ಅದರ ಆಧಾರದ ಮೇಲೆಯೇ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಶುದ್ಧ ರಾಜಕಾರಣಕ್ಕಾಗಿ ಜನರಿಂದಲೇ ದೇಣಿಗೆ ಪಡೆಯಲು ನಿರ್ಧರಿಸಲಾಗಿದೆ’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಸವರಾಜ ಮುದಿಗೌಡರ ಹೇಳಿದರು.</p>.<p>‘ಸ್ವಚ್ಛ ರಾಜಕಾರಣಕ್ಕಾಗಿ, ಸ್ವಚ್ಛ ಹಣ ಎಂಬ ಅಭಿಯಾನದಡಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ. ಜನ ಪಕ್ಷದ ಪೋರ್ಟಲ್ https://bit.ly/Donate4_AAP_HDMC ಕ್ಲಿಕ್ ಮಾಡಿ ಹಣ ನೀಡಬಹುದು. ಪ್ರತಿ ಪೈಸೆಗೂ ಲೆಕ್ಕ ನೀಡಲಾಗುವುದು. ಪಕ್ಷದ ಹಿತೈಷಿಗಳಿಂದ ಈಗಾಗಲೇ ದೇಣಿಗೆ ಸಂಗ್ರಹಿಸುತ್ತಿದ್ದು, ಇದುವರೆಗೆ ₹10 ಲಕ್ಷ ಸಂಗ್ರಹವಾಗಿದೆ. ಇದಕ್ಕಾಗಿ ಆರಂಭಿಸಿರುವ ಸಹಾಯವಾಣಿ 9945561803 ಗೆ ಜನ ಕರೆ ಮಾಡಿ ದೇಣಿಗೆ ನೀಡಬಹುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕ್ರೋನಿ ಕ್ಯಾಪಿಟಲ್ ಬಂಡವಾಳಶಾಹಿಗಳ ಕೈಗೆ ಸಿಕ್ಕಿವೆ. ಅವರ ಪರವಾಗಿಯೇ ನೀತಿ–ನಿಯಮಗಳನ್ನು ರೂಪಿಸುತ್ತಿವೆ. ಕಾಮಗಾರಿಗಳಲ್ಲಿ ಗುತ್ತಿಗೆದಾರ ಅಧಿಕಾರಿಗಳಿಂದಿಡಿದು ಸಚಿವರವರೆಗೆ ಕಮಿಷನ್ ಕೊಡುವುದು ಸಾಮಾನ್ಯವಾಗಿದೆ’ ಎಂದು ಆರೋಪಿಸಿದರು.</p>.<p>‘ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಿರುವುದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯವಾಗಿದೆ.ಇದರಿಂದಾಗಿಯೇ ಅವಳಿನಗರದ ಬಿಆರ್ಟಿಎಸ್, ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಂತಹ ಕಾಮಗಾರಿಗಳು ಜನರಿಗೆ ಸಹಕಾರಿಯಾಗುವ ಬದಲು ಸಮಸ್ಯೆಯಾಗಿವೆ. ಈ ನಿಟ್ಟಿನಲ್ಲಿ ಪಕ್ಷವು ಸ್ವಚ್ಛ ರಾಜಕಾರಣಕ್ಕಾಗಿ ಆರಂಭಿಸಿರುವ ಅಭಿಯಾನಕ್ಕೆ ಜನ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p>ಪಕ್ಷದ ಮುಖಂಡರಿಂದ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಪಕ್ಷದಜಂಟಿ ಕಾರ್ಯದರ್ಶಿ ಶಾಮ ನರಗುಂದ, ಮುಖಂಡರಾದ ಶಾರದಾ ಬಡಿಗೇರ, ವಿದ್ಯಾ ನಾಡಿಗೇರ, ಮಮತಾ ಅಕ್ಕಸಾಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ‘ಭ್ರಷ್ಟಾಚಾರ ನಿರ್ಮೂಲನೆ ಆಮ್ ಆದ್ಮಿ ಪಕ್ಷದ ಮೂಲ ಸಿದ್ಧಾಂತ. ಅದರ ಆಧಾರದ ಮೇಲೆಯೇ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಲಾಗಿದೆ. ಶುದ್ಧ ರಾಜಕಾರಣಕ್ಕಾಗಿ ಜನರಿಂದಲೇ ದೇಣಿಗೆ ಪಡೆಯಲು ನಿರ್ಧರಿಸಲಾಗಿದೆ’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಸವರಾಜ ಮುದಿಗೌಡರ ಹೇಳಿದರು.</p>.<p>‘ಸ್ವಚ್ಛ ರಾಜಕಾರಣಕ್ಕಾಗಿ, ಸ್ವಚ್ಛ ಹಣ ಎಂಬ ಅಭಿಯಾನದಡಿ ದೇಣಿಗೆ ಸಂಗ್ರಹಿಸುತ್ತಿದ್ದೇವೆ. ಜನ ಪಕ್ಷದ ಪೋರ್ಟಲ್ https://bit.ly/Donate4_AAP_HDMC ಕ್ಲಿಕ್ ಮಾಡಿ ಹಣ ನೀಡಬಹುದು. ಪ್ರತಿ ಪೈಸೆಗೂ ಲೆಕ್ಕ ನೀಡಲಾಗುವುದು. ಪಕ್ಷದ ಹಿತೈಷಿಗಳಿಂದ ಈಗಾಗಲೇ ದೇಣಿಗೆ ಸಂಗ್ರಹಿಸುತ್ತಿದ್ದು, ಇದುವರೆಗೆ ₹10 ಲಕ್ಷ ಸಂಗ್ರಹವಾಗಿದೆ. ಇದಕ್ಕಾಗಿ ಆರಂಭಿಸಿರುವ ಸಹಾಯವಾಣಿ 9945561803 ಗೆ ಜನ ಕರೆ ಮಾಡಿ ದೇಣಿಗೆ ನೀಡಬಹುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕ್ರೋನಿ ಕ್ಯಾಪಿಟಲ್ ಬಂಡವಾಳಶಾಹಿಗಳ ಕೈಗೆ ಸಿಕ್ಕಿವೆ. ಅವರ ಪರವಾಗಿಯೇ ನೀತಿ–ನಿಯಮಗಳನ್ನು ರೂಪಿಸುತ್ತಿವೆ. ಕಾಮಗಾರಿಗಳಲ್ಲಿ ಗುತ್ತಿಗೆದಾರ ಅಧಿಕಾರಿಗಳಿಂದಿಡಿದು ಸಚಿವರವರೆಗೆ ಕಮಿಷನ್ ಕೊಡುವುದು ಸಾಮಾನ್ಯವಾಗಿದೆ’ ಎಂದು ಆರೋಪಿಸಿದರು.</p>.<p>‘ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಿರುವುದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯವಾಗಿದೆ.ಇದರಿಂದಾಗಿಯೇ ಅವಳಿನಗರದ ಬಿಆರ್ಟಿಎಸ್, ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಂತಹ ಕಾಮಗಾರಿಗಳು ಜನರಿಗೆ ಸಹಕಾರಿಯಾಗುವ ಬದಲು ಸಮಸ್ಯೆಯಾಗಿವೆ. ಈ ನಿಟ್ಟಿನಲ್ಲಿ ಪಕ್ಷವು ಸ್ವಚ್ಛ ರಾಜಕಾರಣಕ್ಕಾಗಿ ಆರಂಭಿಸಿರುವ ಅಭಿಯಾನಕ್ಕೆ ಜನ ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.</p>.<p>ಪಕ್ಷದ ಮುಖಂಡರಿಂದ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಪಕ್ಷದಜಂಟಿ ಕಾರ್ಯದರ್ಶಿ ಶಾಮ ನರಗುಂದ, ಮುಖಂಡರಾದ ಶಾರದಾ ಬಡಿಗೇರ, ವಿದ್ಯಾ ನಾಡಿಗೇರ, ಮಮತಾ ಅಕ್ಕಸಾಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>