ಕಲಘಟಗಿ ತಾಲ್ಲೂಕಿನ ಕಲ್ಲಪ್ಪ ಶಿರಬಡಗಿ, ಚಂದ್ರಶೇಖರಯ್ಯ ಹಿರೇಮಠ ಹಾಗೂ ನಾಗರಾಜ ನವಲೂರು ಎಂಬುವವರು ಗುತ್ತಿಗೆದಾರ ಪರವಾನಗಿ ಪಡೆಯಲು ಸೆ. 11ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇವರಿಗೆ ಪರವಾನಗಿ ಮಂಜೂರು ಆಗಿದ್ದರೂ, ಅದನ್ನು ಮನೋಹರ ಅವರು ತಡೆಹಿಡಿದಿದ್ದರು. ಪರವಾನಗಿ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿಗೆ ಈ ಮೂವರು ನೀಡಿದ್ದ ದೂರಿನಲ್ಲಿ ಹೇಳಲಾಗಿದೆ.