<p>ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿನ ಧಾನ್ಯ ತುಂಬಿದ ಚೀಲಗಳ ನಾಪತ್ತೆ ಕುರಿತು ಪ್ರಕರಣ ಗುರುವಾರ ಮಧ್ಯಾಹ್ನ ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕುಗೊಂಡಿದೆ.</p>.<p>ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮಣಿ ಹಾಗೂ ಡಿವೈಎಸ್ಪಿ ಎಸ್.ಎಂ.ನಾಗರಾಜ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿ ಪಡೆದರು.</p>.<p>‘ಉಗ್ರಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಗ್ರಾಣ ವ್ಯವಸ್ಥಾಪಕ ಆಕಾಶ ಮೂಶಣ್ಣವರ ಅವರೇ ಈ ಕೃತ್ಯ ಎಸಗಿ ರೈತರಿಗೆ ವಂಚನೆ ಮಾಡಿದ್ದಾರೆ‘ ಎಂದು ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ ದೂರು ನೀಡಿದ್ದಾರೆ.</p>.<p>ಉಗ್ರಾಣದಲ್ಲಿ ಸಂಗ್ರಹವಾಗಿದ್ದ ಚೀಲಗಳ ಕುರಿತು ಉಗ್ರಾಣ ನಿಗಮದ ಮೇಲಾಧಿಕಾರಿ ಅವರು ಎರಡು ದಿನಗಳಿಂದ ಲೆಕ್ಕಪರಿಶೋಧನೆ ಮಾಡುತ್ತಿದ್ದು, ಗುರುವಾರವೂ ಲೆಕ್ಕಪರಿಶೋಧನೆ ಮುಂದುವರೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಅಂದಾಜು ₹1.26 ಕೋಟಿ ಬೆಲೆಬಾಳುವ 3,432 ಕಡಲೆ, 709 ಕ್ವಿಂಟಾಲ್ ಹೆಸರು ಕಾಳು ಚೀಲಗಳು ಸೇರಿದಂತೆ ಒಟ್ಟು 4141 ಚೀಲಗಳು (ಅಂದಾಜು 50 ಕೆಜಿ ತೂಕದ) ಉಗ್ರಾಣದಿಂದ ನಾಪತ್ತೆಯಾಗಿವೆ. ನಾಪತ್ತೆಯಾದ ಚೀಲಗಳ ಮೇಲೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳೀಯ ರಡ್ಡಿ ಸಹಕಾರಿ ಬ್ಯಾಂಕ್ನಲ್ಲಿ ₹43.95 ಲಕ್ಷ ಸಾಲ ಸಹ ಪಡೆದಿರುತ್ತಾನೆ’ ಎಂದು ತಿಳಿದು ಬಂದಿದೆ.</p>.<p>ಲೆಕ್ಕಪರಿಶೋಧಕರಾದ ಶೋಭಾ, ವಿಜಯಲಕ್ಷ್ಮೀ, ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ, ಮಂಜುನಾಥ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>ಪೊಲೀಸ್ ಇಲಾಖೆ ತ್ವರಿತ ಗತಿಯಲ್ಲಿ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರೈತ ಮುಖಂಡ ಮಹಾಬಳೇಶ್ವರ ಹೆಬಸೂರ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿನ ಧಾನ್ಯ ತುಂಬಿದ ಚೀಲಗಳ ನಾಪತ್ತೆ ಕುರಿತು ಪ್ರಕರಣ ಗುರುವಾರ ಮಧ್ಯಾಹ್ನ ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕುಗೊಂಡಿದೆ.</p>.<p>ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮಣಿ ಹಾಗೂ ಡಿವೈಎಸ್ಪಿ ಎಸ್.ಎಂ.ನಾಗರಾಜ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿ ಪಡೆದರು.</p>.<p>‘ಉಗ್ರಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಗ್ರಾಣ ವ್ಯವಸ್ಥಾಪಕ ಆಕಾಶ ಮೂಶಣ್ಣವರ ಅವರೇ ಈ ಕೃತ್ಯ ಎಸಗಿ ರೈತರಿಗೆ ವಂಚನೆ ಮಾಡಿದ್ದಾರೆ‘ ಎಂದು ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ ದೂರು ನೀಡಿದ್ದಾರೆ.</p>.<p>ಉಗ್ರಾಣದಲ್ಲಿ ಸಂಗ್ರಹವಾಗಿದ್ದ ಚೀಲಗಳ ಕುರಿತು ಉಗ್ರಾಣ ನಿಗಮದ ಮೇಲಾಧಿಕಾರಿ ಅವರು ಎರಡು ದಿನಗಳಿಂದ ಲೆಕ್ಕಪರಿಶೋಧನೆ ಮಾಡುತ್ತಿದ್ದು, ಗುರುವಾರವೂ ಲೆಕ್ಕಪರಿಶೋಧನೆ ಮುಂದುವರೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಅಂದಾಜು ₹1.26 ಕೋಟಿ ಬೆಲೆಬಾಳುವ 3,432 ಕಡಲೆ, 709 ಕ್ವಿಂಟಾಲ್ ಹೆಸರು ಕಾಳು ಚೀಲಗಳು ಸೇರಿದಂತೆ ಒಟ್ಟು 4141 ಚೀಲಗಳು (ಅಂದಾಜು 50 ಕೆಜಿ ತೂಕದ) ಉಗ್ರಾಣದಿಂದ ನಾಪತ್ತೆಯಾಗಿವೆ. ನಾಪತ್ತೆಯಾದ ಚೀಲಗಳ ಮೇಲೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳೀಯ ರಡ್ಡಿ ಸಹಕಾರಿ ಬ್ಯಾಂಕ್ನಲ್ಲಿ ₹43.95 ಲಕ್ಷ ಸಾಲ ಸಹ ಪಡೆದಿರುತ್ತಾನೆ’ ಎಂದು ತಿಳಿದು ಬಂದಿದೆ.</p>.<p>ಲೆಕ್ಕಪರಿಶೋಧಕರಾದ ಶೋಭಾ, ವಿಜಯಲಕ್ಷ್ಮೀ, ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ, ಮಂಜುನಾಥ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>ಪೊಲೀಸ್ ಇಲಾಖೆ ತ್ವರಿತ ಗತಿಯಲ್ಲಿ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರೈತ ಮುಖಂಡ ಮಹಾಬಳೇಶ್ವರ ಹೆಬಸೂರ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>