ಸೂದ್ ಚಾರಿಟಿ ಫೌಂಡೇಷನ್, ಬೆಂಗಳೂರಿನ ಸ್ವಾಗ್ ಸಂಸ್ಥೆ ಮತ್ತು ರೈಲ್ವೆ ಪೊಲೀಸ್ ಸಹಯೋಗದಲ್ಲಿ ನಗರದ ರೈಲು ನಿಲ್ದಾಣದ ಆವರಣದಲ್ಲಿರುವ ರೈಲ್ವೆ ಪೊಲೀಸ್ ಠಾಣೆಯ ಪಕ್ಕದಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ ಜಿಲ್ಲೆಗಳ ಸೋಂಕಿತರಿಗೆ ಆಕ್ಸಿಜನ್ ಸೇವೆ ಸಿಗಲಿದೆ. ಸ್ಥಳೀಯವಾಗಿ ಆಕ್ಸಿಜನ್ ತುಂಬಿಸಿಕೊಳ್ಳಲು ಫೌಂಡೇಷನ್ ಕರ್ನಾಟಕ ಗ್ಯಾಸ್ ಎಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಿದೆ.