ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಜಿಲ್ಲಾ ಆಸ್ಪತ್ರೆಯ ನೌಕರರಾದ ನೂರ್ ಅಹಮದ್ ಮತ್ತು ಜಾವಿದ್ ಪಠಾಣ್ ಸಂಕಟ ಪಡುವುದನ್ನು ಕಣ್ಣಾರೆ ಕಂಡರೂ ದಾರಿಹೋಕರು ನಿಸ್ಸಹಾಯಕರಾಗಿದ್ದರು. ಸರ್ಕಾರಿ ಅಂಬುಲೆನ್ಸ್ ಗೆ ಯಾರೋ ಕರೆ ಮಾಡಿ ಮುಕ್ಕಾಲು ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬರದಿರುವುದಕ್ಕೆ ಸ್ಥಳೀಯರು ಅಂಬುಲೆನ್ಸ್ ಚಾಲಕನನ್ನ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೊದಲ್ಲಿದೆ.