<p><strong>ಹುಬ್ಬಳ್ಳಿ:</strong> ಬೆಂಗಳೂರು ಮೂಲದ ರೀಚ್ ಫಾರ್ ಕಾಸ್ ಸಂಸ್ಥೆ, ಹುಬ್ಬಳ್ಳಿಯ ಸೃಷ್ಟಿ ಇನ್ಫೋಟೆಕ್ ಸಹಯೋಗದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ವ್ಯಕ್ತಿ ಹಾಗೂ ಸರ್ಕಾರೇತರ ಸಂಘಗಳಿಂದ ‘ಸೋಷಿಯಲ್ ಇಂಪ್ಯಾಕ್ಟ್’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.</p>.<p>ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೀಚ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಆರ್. ಶಿವಕುಮಾರ್ ‘ಸಮಾಜದ ಮೇಲೆ ಪರಿಣಾಮ ಬೀರುವಂತ ಕೆಲಸಗಳನ್ನು ಮಾಡಿ ಎಲೆ, ಮರದ ಕಾಯಿಯಂತೆ ಉಳಿದುಕೊಂಡವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತದೆ’ ಎಂದರು.</p>.<p>‘ಧಾರವಾಡ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಸಾಧಕರು ಆ. 20ರ ಒಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆ. 25ರಂದು ಮಧ್ಯಾಹ್ನ 3ಕ್ಕೆ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯ ತಲಾ 10 ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು’ ಎಂದು ತಿಳಿಸಿದರು.</p>.<p><strong>ರೀಚ್ ಫಾರ್ ಕಾಸ್, 1ನೇ ಮಹಡಿ, 9ನೇ ಕ್ರಾಸ್, ಸಿ.ಜೆ. ವೆಂಕಟದಾಸ್ ರೋಡ್, ಪದ್ಮನಾಭನಗರ, ಬೆಂಗಳೂರು–50 ಅಥವಾ shilpa.s@reach4cause.com ಈ ಮೇಲ್ ಮಾಡಬಹುದು. ಮಾಹಿತಿಗೆ ಮೊ. 6366688844 ಸಂಪರ್ಕಿಸಿ.</strong></p>.<p>ಸೃಷ್ಟಿ ಇನ್ಫೋಟೆಕ್ ಸಿಇಒ ಅಶ್ವಿನಿ ಅನ್ವೇಕರ್ ಜನ್ನೂ, ರೀಚ್ ಫಾರ್ ಕಾಸ್ ಸಂಸ್ಥೆಯ ರಾಯಭಾರಿಗಳಾದ ಮಮತಾ ಕಡೇಮನಿ ಹಾಗೂ ಟಿ.ವಿ. ಗಿರಿಧರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಬೆಂಗಳೂರು ಮೂಲದ ರೀಚ್ ಫಾರ್ ಕಾಸ್ ಸಂಸ್ಥೆ, ಹುಬ್ಬಳ್ಳಿಯ ಸೃಷ್ಟಿ ಇನ್ಫೋಟೆಕ್ ಸಹಯೋಗದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ವ್ಯಕ್ತಿ ಹಾಗೂ ಸರ್ಕಾರೇತರ ಸಂಘಗಳಿಂದ ‘ಸೋಷಿಯಲ್ ಇಂಪ್ಯಾಕ್ಟ್’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.</p>.<p>ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೀಚ್ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಆರ್. ಶಿವಕುಮಾರ್ ‘ಸಮಾಜದ ಮೇಲೆ ಪರಿಣಾಮ ಬೀರುವಂತ ಕೆಲಸಗಳನ್ನು ಮಾಡಿ ಎಲೆ, ಮರದ ಕಾಯಿಯಂತೆ ಉಳಿದುಕೊಂಡವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತದೆ’ ಎಂದರು.</p>.<p>‘ಧಾರವಾಡ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಸಾಧಕರು ಆ. 20ರ ಒಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆ. 25ರಂದು ಮಧ್ಯಾಹ್ನ 3ಕ್ಕೆ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯ ತಲಾ 10 ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು’ ಎಂದು ತಿಳಿಸಿದರು.</p>.<p><strong>ರೀಚ್ ಫಾರ್ ಕಾಸ್, 1ನೇ ಮಹಡಿ, 9ನೇ ಕ್ರಾಸ್, ಸಿ.ಜೆ. ವೆಂಕಟದಾಸ್ ರೋಡ್, ಪದ್ಮನಾಭನಗರ, ಬೆಂಗಳೂರು–50 ಅಥವಾ shilpa.s@reach4cause.com ಈ ಮೇಲ್ ಮಾಡಬಹುದು. ಮಾಹಿತಿಗೆ ಮೊ. 6366688844 ಸಂಪರ್ಕಿಸಿ.</strong></p>.<p>ಸೃಷ್ಟಿ ಇನ್ಫೋಟೆಕ್ ಸಿಇಒ ಅಶ್ವಿನಿ ಅನ್ವೇಕರ್ ಜನ್ನೂ, ರೀಚ್ ಫಾರ್ ಕಾಸ್ ಸಂಸ್ಥೆಯ ರಾಯಭಾರಿಗಳಾದ ಮಮತಾ ಕಡೇಮನಿ ಹಾಗೂ ಟಿ.ವಿ. ಗಿರಿಧರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>