ಹಳಿ ಮೇಲೆ ಮಣ್ಣಿನ ರಾಶಿ ಹಾಗೂ ಬಂಡೆಗಳು ಬಿದ್ದಿದ್ದರಿಂದ ಬ್ರೇಕ್ ಹಾಕಿದರೂ, ಗಾಲಿಗಳ ಸಮೇತ ಎಂಜಿನ್ ಹಳಿ ತಪ್ಪಿತು. ಸಮೀಪದ ದೂಧಸಾಗರದ ಸ್ಟೇಷನ್ ಮಾಸ್ಟರ್ಗೆ ವಿಷಯ ತಿಳಿಸಿ, ಹುಬ್ಬಳ್ಳಿಯ ನಿಯಂತ್ರಣ ಕಚೇರಿಗೆ ಮಾಹಿತಿ ನೀಡುವಂತೆ ಹೇಳಿದರು. ಇತ್ತ ಬ್ರೇಕ್ ಹಾಕಿದ್ದನ್ನು ಗಮನಿಸಿದ ಗಾರ್ಡ್ ಶೈಲೇಂದ್ರ ಕುಮಾರ್, ರೈಲಿನ ಕೊನೆಯಲ್ಲಿರುವ ಬ್ರೇಕ್ ವ್ಯಾನ್ಗೆ ಹ್ಯಾಂಡ್ ಬ್ರೇಕ್ ಹಾಕಿ ಎಂಜಿನ್ ಹತ್ತಿರ ಹೋದರು.