<p><strong>ಬೆಂಗಳೂರು:</strong> ಬಿಜೆಪಿಯಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ, ಬಿಹಾರ ಸಚಿವ ನಿತಿನ್ ನಬಿನ್ ಎಂಬುವರನ್ನು ನೇಮಕ ಮಾಡಿರುವುದು, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ ಪಂಕಜ್ ಚೌಧರಿ ಅವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಯ ಚರ್ಚೆ ಆರಂಭವಾಗಿದೆ.</p><p>‘ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುತ್ತಾರೋ ಅಥವಾ ಹೊಸಬರನ್ನು ತರುತ್ತಾರೋ? ಹೊಸಬರನ್ನು ಮಾಡಿದರೆ ಯಾರನ್ನು ಮಾಡಬಹುದು’ ಎಂಬ ಲೆಕ್ಕಾಚಾರ ಶುರುವಾಗಿದೆ.</p><p>ತಮ್ಮನ್ನೇ ಮುಂದುವರಿಸುವ ಆದೇಶ ಹೊರಡಿಸಬಹುದು ಎಂಬ ವಿಶ್ವಾಸ ವಿಜಯೇಂದ್ರ ಅವರಿಗಿದೆ. ಒಮ್ಮೆ ತಮ್ಮನ್ನು ಅಧಿಕೃತಗೊಳಿಸಿದರೆ, ಇತರ ನಾಯಕರಲ್ಲಿರುವ ಅಸಮಾಧಾನವೂ ತಗ್ಗಿ ತಮಗೆ ಎಲ್ಲರ ಸಹಕಾರ ಸಿಗಬಹುದು ಎಂಬ ಭರವಸೆ ಅವರದು.</p><p>ಸದ್ಯವೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ತಕ್ಷಣದಲ್ಲೇ ಅಧ್ಯಕ್ಷರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ. ಈ ಚುನಾವಣೆಯಲ್ಲಿ ಅಧ್ಯಕ್ಷರ ಸಂಘಟನಾ ಚತುರತೆ ಮತ್ತು ಚುನಾವಣೆಯಲ್ಲಿ ಪಕ್ಷಕ್ಕೆ<br>ಎಷ್ಟರ ಮಟ್ಟಿಗೆ ಗೆಲುವು ತಂದುಕೊಡಬಲ್ಲರು ಎಂಬುದರ ಪರೀಕ್ಷೆಯೂ ಆಗಲಿದೆ. ಇದರಿಂದ ಮುಂದಿನ ತೀರ್ಮಾನಕ್ಕೆ ವರಿಷ್ಠರು ಇದನ್ನು ಮಾನದಂಡವಾಗಿಯೂ ತೆಗೆದುಕೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಜೆಪಿಯಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹುದ್ದೆಯನ್ನು ಸೃಷ್ಟಿಸಿ, ಬಿಹಾರ ಸಚಿವ ನಿತಿನ್ ನಬಿನ್ ಎಂಬುವರನ್ನು ನೇಮಕ ಮಾಡಿರುವುದು, ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ ಪಂಕಜ್ ಚೌಧರಿ ಅವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಯ ಚರ್ಚೆ ಆರಂಭವಾಗಿದೆ.</p><p>‘ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುತ್ತಾರೋ ಅಥವಾ ಹೊಸಬರನ್ನು ತರುತ್ತಾರೋ? ಹೊಸಬರನ್ನು ಮಾಡಿದರೆ ಯಾರನ್ನು ಮಾಡಬಹುದು’ ಎಂಬ ಲೆಕ್ಕಾಚಾರ ಶುರುವಾಗಿದೆ.</p><p>ತಮ್ಮನ್ನೇ ಮುಂದುವರಿಸುವ ಆದೇಶ ಹೊರಡಿಸಬಹುದು ಎಂಬ ವಿಶ್ವಾಸ ವಿಜಯೇಂದ್ರ ಅವರಿಗಿದೆ. ಒಮ್ಮೆ ತಮ್ಮನ್ನು ಅಧಿಕೃತಗೊಳಿಸಿದರೆ, ಇತರ ನಾಯಕರಲ್ಲಿರುವ ಅಸಮಾಧಾನವೂ ತಗ್ಗಿ ತಮಗೆ ಎಲ್ಲರ ಸಹಕಾರ ಸಿಗಬಹುದು ಎಂಬ ಭರವಸೆ ಅವರದು.</p><p>ಸದ್ಯವೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ತಕ್ಷಣದಲ್ಲೇ ಅಧ್ಯಕ್ಷರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ. ಈ ಚುನಾವಣೆಯಲ್ಲಿ ಅಧ್ಯಕ್ಷರ ಸಂಘಟನಾ ಚತುರತೆ ಮತ್ತು ಚುನಾವಣೆಯಲ್ಲಿ ಪಕ್ಷಕ್ಕೆ<br>ಎಷ್ಟರ ಮಟ್ಟಿಗೆ ಗೆಲುವು ತಂದುಕೊಡಬಲ್ಲರು ಎಂಬುದರ ಪರೀಕ್ಷೆಯೂ ಆಗಲಿದೆ. ಇದರಿಂದ ಮುಂದಿನ ತೀರ್ಮಾನಕ್ಕೆ ವರಿಷ್ಠರು ಇದನ್ನು ಮಾನದಂಡವಾಗಿಯೂ ತೆಗೆದುಕೊಳ್ಳಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>