<p><strong>ಹುಬ್ಬಳ್ಳಿ: </strong>ದೇಶದಲ್ಲಿ ಸಾಕಷ್ಟು ಕರಕುಶಲ ವಸ್ತುಗಳು ಉತ್ಪಾದನೆಯಿದ್ದರೂ, ಅವುಗಳನ್ನು ರಫ್ತು ಮಾಡುವಲ್ಲಿ ತೀರಾ ಹಿಂದುಳಿದಿದ್ದೇವೆ. ರಫ್ತು ಮಾಡಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ರಾಜ್ಯ ಲಘು ಉದ್ಯೋಗ ಭಾರತಿ ಪ್ರಧಾನ ಕಾರ್ಯದರ್ಶಿ ಕೆ.ನಾರಾಯಣ ಪ್ರಸನ್ನ ಹೇಳಿದರು.</p>.<p>ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ಎಕ್ಸಿಮ್ ಬ್ಯಾಂಕ್ ವತಿಯಿಂದ ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್(ಇಪಿಸಿಎಚ್) ಆಯೋಜಿಸಿದ್ದ ‘ರಫ್ತು ಅರಿವು ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.</p>.<p>‘ಭಾರತಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಚಿಕ್ಕ ರಾಷ್ಟ್ರಗಳು ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಜಾಗತಿಕವಾಗಿ 40 ಬಿಲಿಯನ್ ಕರಕುಶಲ ವಸ್ತು ವಹಿವಾಟು ನಡೆದರೆ, ಭಾರತದ ಪಾಲು ಕೇವಲ ಎರಡು ಬಿಲಿಯನ್ ಇದೆ. ಸಾಕಷ್ಟು ಅವಕಾಶವಿದ್ದರೂ ಹಿಂದುಳಿದಿದ್ದೇವೆ’ ಎಂದರು.</p>.<p>‘ಚನ್ನಪಟ್ಟಣ, ಬೈಲಹೊಂಗಲ, ಕಿನ್ನಾಳದ ಕರಕುಶಲ ವಸ್ತು ತಯಾರಕರಿಗೆ ಲಘು ಉದ್ಯೋಗ ಭಾರತಿಯಿಂದ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗುತ್ತಿದೆ. ಕರಕುಶಲ ವಸ್ತು ತಯಾರಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮ ಅಭಿವೃದ್ಧಿ ಪಡಿಸಬೇಕು’ ಎಂದರು.</p>.<p>‘ಕೈಗಾರಿಕೆಗಳಿಗೆ ಸಹಕಾರ ನೀಡಲಾಗುತ್ತದೆ. ಕರಕುಶಲ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅಗತ್ಯವಿರುವ ಸಲಹೆ, ಸಹಕಾರ ಉಚಿತವಾಗಿ ದೊರೆಯಲಿವೆ. ಸಾಂಪ್ರದಾಯಿಕ ಮಾರ್ಗದಲ್ಲಿ ನಾವು ಈಗಿನ ಮಾರುಕಟ್ಟೆಯಲ್ಲಿ ಉದ್ಯಮ ಕಟ್ಟಿಕೊಳ್ಳಲು ಅಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಎಕ್ಸಿಮ್ ಬ್ಯಾಂಕ್ನ ಪೂರ್ಣಪ್ರಜ್ಞ ತಿಳಿಸಿದರು.</p>.<p>ಕರಕುಶಲ ವಸ್ತುಗಳ ರಫ್ತು ಕುರಿತು ಪ್ರೊ. ಪ್ರಸನ್ನ ವೆಂಕಟೇಶ ಮಾಹಿತಿ ನೀಡಿದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್ನ ವಿಭಾಗೀಯ ಮುಖ್ಯಸ್ಥೆ ಪಿ.ಎಲ್. ಶ್ರೀದೇವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ದೇಶದಲ್ಲಿ ಸಾಕಷ್ಟು ಕರಕುಶಲ ವಸ್ತುಗಳು ಉತ್ಪಾದನೆಯಿದ್ದರೂ, ಅವುಗಳನ್ನು ರಫ್ತು ಮಾಡುವಲ್ಲಿ ತೀರಾ ಹಿಂದುಳಿದಿದ್ದೇವೆ. ರಫ್ತು ಮಾಡಲು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ರಾಜ್ಯ ಲಘು ಉದ್ಯೋಗ ಭಾರತಿ ಪ್ರಧಾನ ಕಾರ್ಯದರ್ಶಿ ಕೆ.ನಾರಾಯಣ ಪ್ರಸನ್ನ ಹೇಳಿದರು.</p>.<p>ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸೋಮವಾರ ಎಕ್ಸಿಮ್ ಬ್ಯಾಂಕ್ ವತಿಯಿಂದ ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್(ಇಪಿಸಿಎಚ್) ಆಯೋಜಿಸಿದ್ದ ‘ರಫ್ತು ಅರಿವು ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.</p>.<p>‘ಭಾರತಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಚಿಕ್ಕ ರಾಷ್ಟ್ರಗಳು ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಜಾಗತಿಕವಾಗಿ 40 ಬಿಲಿಯನ್ ಕರಕುಶಲ ವಸ್ತು ವಹಿವಾಟು ನಡೆದರೆ, ಭಾರತದ ಪಾಲು ಕೇವಲ ಎರಡು ಬಿಲಿಯನ್ ಇದೆ. ಸಾಕಷ್ಟು ಅವಕಾಶವಿದ್ದರೂ ಹಿಂದುಳಿದಿದ್ದೇವೆ’ ಎಂದರು.</p>.<p>‘ಚನ್ನಪಟ್ಟಣ, ಬೈಲಹೊಂಗಲ, ಕಿನ್ನಾಳದ ಕರಕುಶಲ ವಸ್ತು ತಯಾರಕರಿಗೆ ಲಘು ಉದ್ಯೋಗ ಭಾರತಿಯಿಂದ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗುತ್ತಿದೆ. ಕರಕುಶಲ ವಸ್ತು ತಯಾರಕರು ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮ ಅಭಿವೃದ್ಧಿ ಪಡಿಸಬೇಕು’ ಎಂದರು.</p>.<p>‘ಕೈಗಾರಿಕೆಗಳಿಗೆ ಸಹಕಾರ ನೀಡಲಾಗುತ್ತದೆ. ಕರಕುಶಲ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅಗತ್ಯವಿರುವ ಸಲಹೆ, ಸಹಕಾರ ಉಚಿತವಾಗಿ ದೊರೆಯಲಿವೆ. ಸಾಂಪ್ರದಾಯಿಕ ಮಾರ್ಗದಲ್ಲಿ ನಾವು ಈಗಿನ ಮಾರುಕಟ್ಟೆಯಲ್ಲಿ ಉದ್ಯಮ ಕಟ್ಟಿಕೊಳ್ಳಲು ಅಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಎಕ್ಸಿಮ್ ಬ್ಯಾಂಕ್ನ ಪೂರ್ಣಪ್ರಜ್ಞ ತಿಳಿಸಿದರು.</p>.<p>ಕರಕುಶಲ ವಸ್ತುಗಳ ರಫ್ತು ಕುರಿತು ಪ್ರೊ. ಪ್ರಸನ್ನ ವೆಂಕಟೇಶ ಮಾಹಿತಿ ನೀಡಿದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಕರಕುಶಲ ಅಭಿವೃದ್ಧಿ ಸಂವರ್ಧನ ಪರಿಷತ್ನ ವಿಭಾಗೀಯ ಮುಖ್ಯಸ್ಥೆ ಪಿ.ಎಲ್. ಶ್ರೀದೇವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>